CrimeNational

ಮೆಟ್ರೋ ನಿಲ್ದಾಣದಲ್ಲೇ ಗುಂಡು ಹಾರಿಸಿಕೊಂಡ ಸಿಬ್ಬಂದಿ!

ನವದೆಹಲಿ; ಮೆಟ್ರೋ ನಿಲ್ದಾಣದಲ್ಲೇ ಭದ್ರತಾ ಸಿಬ್ಬಂದಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ದೆಹಲಿಯ ಪಶ್ಚಿನ ವಿಹಾರ್‌ ಮೆಟ್ರೋ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದ್ದು, ಸಿಐಎಸ್‌ಎಫ್‌ ಸಿಬ್ಬಂದಿ ಆತ್ಮಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ; ಕೈಮುಗಿದು ಕೇಳಿಕೊಳ್ಳುತ್ತೇನೆ, ಬಿಜೆಪಿ ಪರ ನಿಲ್ಲಿ; ಈಶ್ವರಪ್ಪಗೆ ವಿಜಯೇಂದ್ರ ಮನವಿ

ಬೆಳಗ್ಗೆ 7 ಗಂಟೆ ಸುಮಾರಿಗೆ ಘಟನೆ;

ಸಿಐಎಸ್​ಎಫ್​ ಆಧಿಕಾರಿ ಸಹಾರೆ ಕಿಶೋರ್ ಎಂಬುವವರು ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಕರ್ತವ್ಯದಲ್ಲಿದ್ದರು.. ಇದೇ ವೇಳೆ ಅವರು ತಮ್ಮ ಬಳಿ ಇದ್ದ ಗನ್‌ನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿದ್ದಾರೆ.. ಇವರು ಮಹಾರಾಷ್ಟ್ರದ ಗಡ್‌ಚಿರೋಲಿ ಮೂದವರು ಎಂದು ತಿಳಿದುಬಂದಿದೆ.. ಆದ್ರೆ ಆತ್ಮಹತ್ಯೆಗೆ ಕಾರಣ ಇನ್ನೂ ಗೊತ್ತಾಗಿಲ್ಲ..

ಇದನ್ನೂ ಓದಿ; ಬಿಜೆಪಿ ಸಂಸದೆ ಮೇಲೆ ಅಟ್ಯಾಕ್‌; ಮೊಬೈನ್‌ನಲ್ಲಿ ದೃಶ್ಯ ಸೆರೆ

2022ರಿಂದ ಮೆಟ್ರೋದಲ್ಲಿ ಕೆಲಸ;

ಸರ್ವೀಸ್‌ ರೈಫಲ್‌ನಿಂದ ಸಹಾರೆ ಕಿಶೋರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಇವರು 2022ರಿಂದ ದೆಹಲಿ ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದರು.. ಇವರ ಕುಟುಂಬ ದೆಹಲಿಯ ನರೇಳದಲ್ಲಿರುವ ಸರ್ಕಾರಿ ವಸತಿ ಸಮುಚ್ಚಯದಲ್ಲಿ ವಾಸವಿದೆ.. ಆದ್ರೆ ಅದೇನಾಯ್ತೋ ಏನೋ ಕೆಲಸದಲ್ಲಿರುವಾಗಲೇ ಕಿಶೋರ್‌ ಅವರು ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..

ಇದನ್ನೂ ಓದಿ; ಗೋಕರ್ಣಕ್ಕೆ ಹೊರಟಿದ್ದ ಬಸ್‌ ಪಲ್ಟಿ; 4 ಮಂದಿ ದುರ್ಮರಣ!

ತಲೆಗೆ ರೈಫಲ್‌ ಇಟ್ಟು ಟ್ರಿಗರ್‌ ಪ್ರೆಸ್‌;

ಬೆಳಗ್ಗೆ ಬೆಂಚ್‌ ಮೇಲೆ ಕುಳಿತುಕೊಂಡಿದ್ದ ಕಿಶೋರ್‌ ಅವರು, ರೈಫಲ್‌ ಸರಿ ಮಾಡುತ್ತಿದ್ದರು.. ಅನಂತರ ನೋಡನೋಡುತ್ತಿದ್ದಂತೆ ಅವರು ತಲೆಗೆ ರೈಫಲ್‌ ಇಟ್ಟುಕೊಂಡು ಟ್ರಿಗರ್‌ ಪ್ರೆಸ್‌ ಮಾಡಿದ್ದಾರೆ.. ಇದನ್ನು ನೋಡಿ ಎಲ್ಲರೂ ಗಾಬರಿಯಿಂದ ಅಲ್ಲಿಗೆ ಓಡಿ ಬಂದಿದ್ದಾರೆ… ಆದ್ರೆ ತಲೆಗೆ ನೇರವಾಗಿ ಗುಂಡು ಹಾರಿಸಿಕೊಂಡಿದ್ದರಿಂದ ಅವರು ಅಲ್ಲಿಯೇ ಸಾವನ್ನಪ್ಪಿದ್ದಾರೆ.. ಆತ್ಮಹತ್ಯೆಗೆ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

ಇದನ್ನೂ ಓದಿ; ದೇಶದ ಅತ್ಯಂತ ದುಬಾರಿ ಮನೆಗಳಿವು..!; ಯಾವ ಮನೆಗೆ ಎಷ್ಟು ಬೆಲೆ..?

 

Share Post