CrimeDistricts

ಕುತ್ತಿಗೆಗೆ ಚಾಕು ಇಟ್ಟರು; ಮನೆಯವರನ್ನೆಲ್ಲಾ ಕಟ್ಟಿಹಾಕಿ ದರೋಡೆ ಮಾಡಿದರು..!

ದಕ್ಷಿಣ ಕನ್ನಡ‌; ಮನೆಯ ಯಜಮಾನನ ಕುತ್ತಿಗೆಗೆ ಚಾಕು ಇಟ್ಟು, ಮನೆಯವರನ್ನೆಲ್ಲಾ ಕಟ್ಟಿ ಹಾಕಿ, ನಗ-ನಾಣ್ಯ ಲೂಟಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿ ನಡೆದಿದೆ. ಇಲ್ಲಿ ಕುದ್ಯಾಡಿ ಎಂಬ ಗ್ರಾಮದ ಗುರುಪ್ರಸಾದ್‌ ರೈ ಎಂಬುವವರ ಮನೆಯಲ್ಲಿ ಇಂದು ಬೆಳಗಿನ ಜಾವ ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ.

ಮನೆಯಲ್ಲಿ ಗುರುಪ್ರಸಾದ್‌ ರೈ ಹಾಗೂ ಅವರ ತಾಯಿ ಮಾತ್ರ ಇದ್ದರು. ಇಂದು ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಎಂಟು ಮಂದಿ ಇದ್ದ ದರೋಡೆಕೋರರ ತಂಡ ಮನೆಗೆ ನುಗ್ಗಿದೆ. ಮೊದಲಿಗೆ ಮನೆಯ ಯಜಮಾನ ಗುರುಪ್ರಸಾದ್‌ ರೈ ಅವರ ಕುತ್ತಿಗೆಗೆ ಚಾಕು ಇಡಲಾಗಿದೆ. ಕೂಗಿಕೊಂಡರೆ ಸಾಯಿಸುತ್ತೇವೆ ಎಂದು ಬೆದರಿಸಿದ್ದಾರೆ. ಅನಂತರ ತಾಯಿ, ಮಗ ಇಬ್ಬರನ್ನೂ ಕಟ್ಟಿಹಾಕಿದ್ದಾರೆ.

ನಂತರ ಮನೆಯಲ್ಲಿದ್ದ 40 ಸಾವಿರ ರೂಪಾಯಿ ನಗದು ಹಾಗೂ 120 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ದರೋಡೆಕೋರರು ತುಳು ಹಾಗೂ ಕನ್ನಡ ಭಾಷೆ ಮಾತನಾಡುತ್ತಿದ್ದರು ಎಂದು ಗುರುಪ್ರಸಾದ್‌ ರೈ ಹೇಳಿದ್ದಾರೆ. ಗುರುಪ್ರಸಾದ್‌ ರೈ ಅವರು ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರ ಆಪ್ತವಲಯುದಲ್ಲಿ ಗುರುತಿಸಿಕೊಂಡವರು. ಇವರ ಮನೆಯಲ್ಲಿ ಹೆಚ್ಚಿನ ನದು ಇರಬಹುದೆಂದು ದರೋಡೆಕೋರರು ಈ ಮನೆಗೆ ನುಗ್ಗಿದ್ದಾರೆ. ಆದ್ರೆ ಅವರಿಗೆ ಹೆಚ್ಚಿನ ಹಣ ಸಿಕ್ಕಿಲ್ಲ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Share Post