BengaluruCrime

ದರ್ಶನ್‌ ಮನವಿ ಮಾಡಿಕೊಂಡಿದ್ದಕ್ಕಾಗಿ ಸೈಡ್‌ ವಾಲ್‌ ಹಾಕಿಸಿಕೊಟ್ರಂತೆ ಪೊಲೀಸರು!!

ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ 14 ಮಂದಿಯ ವಿಚಾರಣೆ ನಡೆಯುತ್ತಿದೆ.. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.. ಆದ್ರೆ ನಿನ್ನೆ ಈ ಪೊಲೀಸ್‌ ಠಾಣೆ ಸುತ್ತ ಶ್ಯಾಮಿಯಾನದವರನ್ನು ಕರೆಸಿ, ಸೈಡ್‌ ವಾಲ್‌ ಹಾಕಿಸಲಾಗಿದೆ.. ಹೀಗಾಗಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.. ಇದೀಗ ಅನುಮಾನಗಳು ನಿಜವಾಗಿವೆ.. ನಟ ಹಾಗೂ ಕೊಲೆ ಆರೋಪಿ ದರ್ಶನ್‌ಗಾಗಿ ಈ ಸೈಡ್‌ವಾಲ್‌ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ..

ನನಗೆ ಒಂದೇ ಕಡೆ ಕುಳಿತು ಅಭ್ಯಾಸವಿಲ್ಲ.. ಒಂದೇ ಕೂತ್ಕೊಂಡು ಇರೋದಕ್ಕೆ ಆಗುತ್ತಿಲ್ಲ.. ನಾನು ವಾಕ್‌ ಮಾಡಬೇಕು.. ಸಿಗರೇಟ್‌ ಇಲ್ಲದಿದ್ದರೆ ನನಗೆ ಕೈ ನಡುಗುತ್ತದೆ ಎಂದೆಲ್ಲಾ ದರ್ಶನ್‌ ಪೊಲೀಸರ ಮುಂದೆ ಮನವಿ ಮಾಡಿಕೊಂಡಿದ್ದಾರೆ.. ಆದ್ರೆ ಪೊಲೀಸ್‌ ಠಾಣೆಯ ಒಳಗೆ ಓಡಾಡೋದಕ್ಕೆ ಹೆಚ್ಚಿನ ಜಾಗವಿಲ್ಲ.. ಹೀಗಾಗಿ ಠಾಣೆಯ ಆವರಣದಲ್ಲಿ ಓಡಾಡೋದಕ್ಕೆ ಅವಕಾಶ ಮಾಡಿಕೊಡೋದಕ್ಕಾಗಿ ಈ ಸೈಡ್‌ ವಾಲ್‌ ಹಾಕಿಸಲಾಗಿದೆ ಎಂದು ಹೇಳಲಾಗುತ್ತಿದೆ..

 

Share Post