CinemaCrime

ನನಗೂ ಅಶ್ಲೀಲ ಸಂದೇಶಗಳು ಸಾಕಷ್ಟು ಬಂದಿದ್ದವು; ದರ್ಶನ್‌ ಪ್ರಕರಣದ ಬಗ್ಗೆ ನಟಿ ರಮ್ಯಾ ಹೇಳೊದೇನು..?

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ ಪ್ರಕರಣದ ಬಗ್ಗೆ ಸ್ಯಾಂಡಲ್‌ವುಡ್‌ ಕ್ವೀನ್‌ ಹಾಗೂ ಮಾಜಿ ಸಂಸದೆ ರಮ್ಯಾ ಮಾತನಾಡಿದ್ದಾರೆ.. ಈ ಬಗ್ಗೆ ಅವರು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ..

ಅಶ್ಲೀಲ ಸಂದೇಶಗಳು ನನಗೂ ಹಲವಾರು ಬಾರಿ ಬಂದಿದ್ದವು.. ನಾನು ಕೂಡಾ ಸಾಕಷ್ಟು ಬಾರಿ ಟ್ರೋಲ್‌ಗೆ ಒಳಗಾಗಿದ್ದೆ.. ಆಗೆಲ್ಲಾ ನನಗೆ ಬೇಜಾರಾಗಿತ್ತು.. ಕೋಪ ಜಾಸ್ತಿಯಾದಾಗ ನಾನು ಪೊಲೀಸರಿಗೆ ಕಂಪ್ಲೇಂಟ್‌ ಕೊಟ್ಟಿದೆ.. ಪೊಲೀಸರು ನನಗೆ ಸಂದೇಶ ಕಳುಹಿಸಿದವರನ್ನು ಕರೆಸಿ ಬುದ್ಧಿವಾದ ಹೇಳಿದ್ದರು.. ಅನಂತರ ನಾನು ಕೇಸ್‌ ವಾಪಸ್‌ ಪಡೆದುಕೊಂಡಿದ್ದೆ.. ನನ್ನನ್ನು ಕೂಡಾ ತುಂಬಾ ಜನ ಕೆಟ್ಟ ಪದಗಳಿಂದ ನಿಂದನೆ ಮಾಡುತ್ತಾರೆ.. ಬೇಜಾರಾದಾಗ ಅವರಿಗೆ ಕಾನೂನಿನ ಮೂಲಕ ಬುದ್ಧಿ ಕಲಿಸುತ್ತೇನೆ.. ಯಾರೂ ಕೂಡಾ ಕಾನೂನು ಮೀರಿ ಹೋಗಬಾರದು.. ಕಾನೂನಿನ ಅಡಿಯಲ್ಲೇ ನಡೆಬೇಕು ಎಂದು ರಮ್ಯಾ ಹೇಳಿಕೊಂಡಿದ್ದಾರೆ..

ಬೇರೆಯವರ ಹೆಂಡತಿ ಹಾಗೂ ಮಕ್ಕಳನ್ನು ಟ್ರೋಲ್ ಮಾಡುವವರು ನಮ್ಮ ನಡುವೆ ಬಹಳ ಮಂದಿ ಇದ್ದಾರೆ. ನಾವು ಕೆಟ್ಟ ಸಮಾಜದಲ್ಲಿ ಬದುಕುತ್ತಿದ್ದೇವೆ. ಆದರೂ ಕೂಡಾ ಪ್ರತಿಯೊಬ್ಬರೂ ಕಾನೂನು ಪಾಲಿಸಬೇಕು.. ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ಕಾನೂನಿನ ಮೊರೆ ಹೋಗಬೇಕು. ಕೆಲವರು ನಕಲಿ ಖಾತೆಗಳ ಮೂಲಕ ಟ್ರೋಲ್ ಮಾಡಿ ತಮ್ಮ ಜೀವನವನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ. ಯಾರೂ ಕೂಡಾ ತಪ್ಪು ಮಾಡಿದ್ದಾರೆಂದು ಕಾನೂನು ಕೈಗೆತ್ತಿಕೊಂಡು ಒಡೆದು ಸಾಯಿಸಬಾರದು.. ಒಂದು ಸಣ್ಣ ದೂರು ಸಾಕು ಅವರನ್ನು ಮಟ್ಟ ಹಾಕೋದಕ್ಕೆ. ನನಗೆ ಪೊಲೀಸರ ಮೇಲೆ ನಂಬಿಕೆ ಇದೆ ಎಂದೂ ರಮ್ಯಾ ಬರೆದುಕೊಂಡಿದ್ದಾರೆ.

Share Post