CrimeDistricts

ವ್ಯಕ್ತಿಯನ್ನು ಐದು ತುಂಡು ಮಾಡಿ ಬಿಸಾಡಿದ ದುಷ್ಕರ್ಮಿಗಳು

ಮಂಡ್ಯ; ಮಂಡ್ಯ ಜಿಲ್ಲೆಯಲ್ಲಿ ಕೆಲ ತಿಂಗಳ ಹಿಂದೆ ಇಬ್ಬರು ಮಹಿಳೆಯರನ್ನು ತುಂಡು ಮಾಡಿ ಕೊಲೆ ಮಾಡಲಾಗಿತ್ತು. ಇದೀಗ ಅಂತಹದ್ದೇ ಒಂದು ಪ್ರಕರಣ ನಡೆದಿದೆ. ತಾಲ್ಲೂಕಿನ ಕರೆಗೋಡು ಪೊಲೀಸ್‌ ಠಾಣೆ ವ್ಯಾಪ್ತಿಯ ನಾಲೆಯಲ್ಲಿ ವ್ಯಕ್ತಿಯೊಬ್ಬರ ದೇಹದ 5 ತುಂಡುಗಳು ಪತ್ತೆಯಾಗಿದೆ. ವ್ಯಕ್ತಿಯನ್ನು ತುಂಡುಗಳಾಗಿ ಕತ್ತರಿಸಿ ಬಿಸಾಕಲಾಗಿದೆ.

ಕೊಲೆಯಾದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಆ ವ್ಯಕ್ತಿ ೩೦ ರಿಂದ ೩೫ ವಯಸ್ಸಿನ ಆಸುಪಾಸಿನವನು ಎಂದು ತಿಳಿದುಬಂದಿದೆ, ಕೈಗಳು, ಕಾಲು, ತಲೆ ಬುರುಡೆ, ಹೊಟ್ಟೆಯ ಭಾಗ ಪ್ರತ್ಯೇಕ ಮಾಡಿ ನಾಲೆಯಲ್ಲಿ ಎಸೆಯಲಾಗಿದೆ.

Share Post