CinemaCrime

ಆ ರಾಜಕಾರಣಿಯ ಕಾಮದಾಟಕ್ಕೆ ಲೈವ್‌ನಲ್ಲೇ ಕಣ್ಣೀರಿಟ್ಟ ಖ್ಯಾತ ನಟಿ!

ಬೆಂಗಳೂರು; ಕಾಸ್ಟಿಂಗ್‌ ಕೌಚ್‌ ಬಗ್ಗೆ ಸಿನಿಮಾ ರಂಗದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.. ಇದರ ಭಾಗವಾಗಿ ಖ್ಯಾತ ನಟಿಯೊಬ್ಬರು ಲೈವ್‌ ನಲ್ಲೇ ಕಣ್ಣೀರಿಟ್ಟಿದ್ದು, ಆ ರಾಜಕಾರಣಿಯ ಕಾಮದಾಟದಿಂದ ಅನುಭವಿಸಿದ ಯಾತನೆಯ ಬಗ್ಗೆ ಹೇಳಿಕೊಂಡಿದ್ದಾರೆ.. ಆಂಧ್ರಪ್ರದೇಶದಲ್ಲಿ ಈ ಹಿಂದೆ ಅಧಿಕಾರ ನಡೆಸಿದ್ದ ವೈಎಸ್‌ಆರ್‌ಸಿಪಿ ಪಕ್ಷದ ಮುಖಂಡನೊಬ್ಬ ನನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದರು. ಇದರ ಜೊತೆಗೆ ನನ್ನ ಕುಟುಂಬಕ್ಕೂ ಚಿತ್ರಹಿಂಸೆ ನೀಡಿದ್ದರು ಎಂದು ಮುಂಬೈ ಮೂಲದ ನಟಿ ಹಾಗೂ ರೂಪದರ್ಶಿ ಕಾದಂಬರಿ ಜೇಟ್ವಾನಿ ಆರೋಪ ಮಾಡಿದ್ದಾರೆ..

ಇದನ್ನೂ ಓದಿ; 286ಕ್ಕೂ ಹೆಚ್ಚು ಯುವತಿಯರಿಗೆ ಬ್ಲ್ಯಾಕ್‌ಮೇಲ್‌; ಯೂಟ್ಯೂಬರ್‌ಗೆ 17 ವರ್ಷ ಜೈಲು!

ಮೂಲತಃ ಗುಜರಾತ್‌ನವರಾದ ಈ ನಟಿ ಬಾಲಿವುಡ್‌ನಲ್ಲಿ ನಟನೆ ಮಾಡುತ್ತಿದ್ದಾರೆ.. ಆಗಿನ ಸಿಎಂ ಜಗನ್‌ಮೋಹನ್‌ ರೆಡ್ಡಿ ಅವರ ಆಪ್ತವಲಯದಲ್ಲಿದ್ದ ಕುಕ್ಕಲ ವಿದ್ಯಾಸಾಗರ್‌ ಎಂಬ ನಾಯಕ ನನ್ನ ಹಾಗೂ ನನ್ನ ಕುಟುಂಚಕ್ಕೆ ಚಿತ್ರಹಿಂಸೆ ನೀಡಿದ್ದಾರೆ ಎಂದು ನಟಿ ಆರೋಪ ಮಾಡಿದ್ದಾಳೆ.. ನನ್ನ ವಿರುದ್ಧ ಸುಳ್ಳು ಕೇಸ್‌ ದಾಖಲಿಸಿ ನನ್ನ ಹಾಗೂ ನನ್ನ ಕುಟುಂಬವನ್ನು ಒಂದೂವರೆ ತಿಂಗಳು ಜೈಲಿನಲ್ಲಿರಿಸಲಾಗಿತ್ತು.. ಜಾಮೀನಿನ ಮೇಲೆ ಹೊರಗೆ ಬಂದ ಮೇಲೂ ನನ್ನನ್ನು ಅಪಹರಿಸಿ ಕೊಂಡಪಲ್ಲಿಯ ಸರ್ಕಾರಿ ಗೆಸ್ಟ್‌ ಹೌಸ್‌ ಒಂದರಲ್ಲಿ ಕೂಡಿ ಹಾಕಿ ಹಿಂಸೆ ನೀಡಲಾಯಿತು.. ಈ ವೇಳೆ ನನ್ನ ತಂದೆ ಹಲ್ಲೆ ಮಾಡಲಾಗಿದ್ದು, ಇದರಿಂದ ನನ್ನ ತಂದೆಯ ಕಿವಿ ಕೇಳಸದಂತಾಗಿದೆ ಎಂದೂ ನಟಿ ಕಾದಂಬರಿ ಹೇಳಿದ್ದಾರೆ..

ಇದನ್ನೂ ಓದಿ; ಈ ಗ್ರಾಮಗಳಲ್ಲಿ ಹೆಚ್ಚಿದ ತೋಳಗಳ ಹಾವಳಿ; ತಿಂಗಳಲ್ಲಿ 7 ಮಕ್ಕಳ ಬಲಿ!

 

Share Post