CrimeNational

ಮದುವೆ ಆಸೆ ಈಡೇರಿಸಲಿಲ್ಲ ಅಂತ ಶಿವಲಿಂಗವನ್ನೇ ಹೊತ್ತೊಯ್ದ ಯುವಕ!

ಲಕ್ನೋ; ಯುವಕನೊಬ್ಬ ಮದುವೆ ಸೆಟ್ಟೇರುವಂತೆ ವರ ಕೊಡು ಎಂದು ಶಿವಲಿಂಗದ ಮುಂದೆ ಪ್ರಾರ್ಥನೆ ಮಾಡಿದ್ದ. ಆದ್ರೆ ದೇವರು ಆತನ ಮದುವೆ ಆಸೆ ಈಡೇರಿಸಿಲ್ಲ. ಇದರಿಂದ ರೊಚ್ಚಿಗೆದ್ದ ಯುವಕ ದೇವಸ್ಥಾನದಲ್ಲಿದ್ದ ಶಿವಲಿಂಗವನ್ನೇ ಹೊತ್ತೊಯ್ದಿದ್ದಾನೆ. ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. 

ಇಲ್ಲಿ ಭೈರೋ ಬಾಬಾ ದೇವಸ್ಥಾನದಲ್ಲಿದ್ದ ಶಿವಲಿಂಗವನ್ನು ಯುವಕ ಕದ್ದೊಯ್ದಿದ್ದಾನೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಭಕ್ತರು ಎಂದಿನಂತೆ ಇಂದು ಬೆಳಗ್ಗೆ ದೇಗುಲಕ್ಕೆ ಭೇಟಿ ನೀಡಿದಾಗ ಶಿವಲಿಂಗವೇ ಪತ್ತೆ ಇರಲಿಲ್ಲ. ಈ ಸಂಬಂಧ ಗ್ರಾಮದ ಅಧ್ಯಕ್ಷ ಪ್ರಕಾಶ್ ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿ ಚೋಟು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಬಿದಿರಿನ ರಾಶಿಯ ಅಡಿಯಲ್ಲಿ ಶಿವಲಿಂಗವನ್ನು ಬಚ್ಚಿಟ್ಟಿದ್ದ ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಲಿಂಗ ಕದ್ದೊಯ್ದಿಕ್ಕೆ ಕಾರಣ ತಿಳಿಸಿದ್ದಾನೆ. ಶ್ರಾವಣ ಮಾಸದಲ್ಲಿ ಶ್ರದ್ಧೆಯಿಂದ ಶಿವನ ಪೂಜೆ ಮಾಡುತ್ತಿದ್ದೆ. ಉಪವಾಸ ಕೂಡಾ ಮಾಡುತ್ತಿದ್ದೆ. ಆದರೂ ಶಿವ ನನ್ನ ಮದುವೆ ಆಸೆಯನ್ನು ಈಡೇರಿಸಿಲ್ಲ. ಹೀಗಾಗಿ ನೊಂದು ಈ ರೀತಿ ಮಾಡಿದೆ ಎಂದು ಆತ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.

 

Share Post