CrimeDistricts

ಕುಡುಗೋಲಿನಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ!

ಬೆಳಗಾವಿ; ಮಕ್ಕಳ ವಿಚಾರವಾಗಿ ಗಂಡ-ಹೆಂಡತಿ ಜಗಳ ಮಾಡಿಕೊಂಡಿದ್ದು, ಇದು ತಾರಕಕ್ಕೇರಿದ್ದರಿಂದ ಗಂಡ, ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಅರಟಾಳ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಸುನಂದಾ ಎಂಬಾಕೆ ಕೊಲೆಗೀಡಾಗಿದ್ದಾಳೆ..

ಪತಿ ಗೋಪಾಲ ನಾಯಕ ಎಂಬಾತನೇ ಈ ಕೃತ್ಯ ಎಸಗಿರುವಾತ.. ಮಕ್ಕಳ ವಿಚಾರದಲ್ಲಿ ಪತ್ನಿ ಸುನಂದಾ ಜೊತೆ ಪತಿ ಗೋಪಾಲ ಜಗಳ ಮಾಡಿದ್ದಾನೆ.. ಈ ವೇಳೆ ಜಗಳ ತಾರಕಕ್ಕೇರಿದೆ.. ಆಗ ಗೋಪಾಲ ಅಲ್ಲಿಯೇ ಇದ್ದ ಕುಡುಗೋಲು ತೆಗೆದುಕೊಂಡು ಪತ್ನಿ ಮೇಲೆ ದಾಳಿ ಮಾಡಿದ್ದಾನೆ.. ಇದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಸುನಂದಾ ಸಾವನ್ನಪ್ಪಿದ್ದಾಳೆ..

 

Share Post