BengaluruCrime

ಅಂದು ದರ್ಶನ್‌ ಅಂಡ್‌ ಗ್ಯಾಂಗ್‌ 8 ಲಕ್ಷ ರೂಪಾಯಿ ಎಣ್ಣೆ ಕುಡಿದಿತ್ತಂತೆ..!

ಹುಬ್ಬಳ್ಳಿ; ಹುಬ್ಬಳ್ಳಿಯಲ್ಲಿ ರಾಬರ್ಟ್‌ ರಿಲೀಸ್‌ ಇವೆಂಟ್‌ ವೇಳೆ ದರ್ಶನ್‌ ಟೀಂ ಕುಡಿದಿದ್ದ ಬಿಲ್‌ 8-9 ಲಕ್ಷ ರೂಪಾಯಿ ಮಾಡಲಾಗಿತ್ತು.. ಅಷ್ಟು ಆಗಿದ್ದರೂ ಇನ್ನೂ ಎಣ್ಣೆ ಕಡಿಮೆಯಾಯ್ತು ಎಂದು ದರ್ಶನ್‌ ನನ್ನ ಜೊತೆ ಜಗಳ ಮಾಡಿದ್ದರು ಎಂದು ನಿರ್ಮಾಪಕ ಉಮಾಪತಿಗೌಡ ಹೇಳಿಕೊಂಡಿದ್ದಾರೆ.. ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು, ರಾಬರ್ಟ್‌ ರಲೀಸ್‌ ಇವೆಂಟ್‌ ವೇಳೆ ನಡೆದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ..

ಎಣ್ಣೆಗಾಗಿ ದರ್ಶನ್‌ ಹಾಗೂ ನಮ್ಮಿಬ್ಬರ ನಡುವೆ ಜಗಳ ಆಯ್ತು.. ಹರಿಕೃಷ್ಣ ಸತ್‌ ಇಬ್ಬರನ್ನೂ ಸಮಾಧಾನ ಮಾಡಿದರು ಎಂದು ಉಮಾಪತಿ ಹೇಳಿದ್ದಾರೆ.. ನಾನು ರಾಜನಂತೆ ಇದ್ದೆ. ಸಿನಿಮಾ ಮಾಡಿ ಎಣ್ಣೆ ಸಪ್ಲೈಯರ್‌ ಆಗಿಬಿಟ್ಟೆ ಎಂದು ನೊಂದುಕೊಂಡೆ ಎಂದೂ ಉಮಾಪತಿ ಹೇಳಿಕೊಂಡಿದ್ದಾರೆ..

 

Share Post