BengaluruCrime

ಸೆಲ್‌ನಲ್ಲಿ ದರ್ಶನ್‌ ಒಂಟಿ; ತಗ್ಗಿ ಬಗ್ಗಿ ನಡೆಯುತ್ತಿದ್ದಾರೆ ದಾಸ..!

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸ್‌ ಸುಪರ್ದಿಯಲ್ಲಿರುವ ದರ್ಶನ್‌ ಸಾಕಷ್ಟು ಸಪ್ಪಗಾಗಿದ್ದಾರೆ ಎಂದು ತಿಳಿದುಬಂದಿದೆ.. ಇತರೆ ಆರೋಪಿಗಳನ್ನು ಒಂದು ಕಡೆ ಇಟ್ಟಿದ್ದರೆ, ದರ್ಶನ್‌ ಅವರನ್ನೇ ಒಂದು ಸೆಲ್‌ನಲ್ಲಿ ಇಡಲಾಗಿದೆ.. ಒಂದು ಚಾಪೆ, ಒಂದು ಚೇರ್‌ ಮಾತ್ರ ದರ್ಶನ್‌ಗೆ ನೀಡಲಾಗಿದೆ.. ಹೀಗಾಗಿ ಅವರು ಮೌನವಾಗಿ ಕುಳಿತಿದ್ದಾರೆ.. ಅದರಲ್ಲೂ ಕೂಡಾ ಪೊಲೀಸ್‌ ಕಮೀಷನರ್‌ ಮುಖ ನೋಡಿದರೆ ದರ್ಶನ್‌ ಸಪ್ಪಗೆ ಮುಖ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ..

ಮೊದಲು ಎರಡು ದಿನ ದರ್ಶನ್‌ ಎದೆಯುಬ್ಬಿಸಿಕೊಂಡು ತಿರುಗಾಡುತ್ತಿದ್ದರು.. ಈಗ ಅವರ ವಿರುದ್ಧ ಹಲವಾರು ಸಾಕ್ಷ್ಯಗಳು ಸಿಕ್ಕಿವೆ.. ಇದರ ಜೊತೆ ಪೊಲೀಸರು ಮುಲಾಜಿಲ್ಲದೆ ವಿಚಾರಣೆ ಶುರು ಮಾಡಿದ್ದಾರೆ.. ಹೀಗಾಗಿ ದರ್ಶನ್‌ ಕೂಡಾ ಈಗ ತಗ್ಗಿ ಬಗ್ಗಿ ನಡೆಯುತ್ತಿದ್ದಾರೆ.. ಮೊದಲು ಸಾರ್‌ ಎಂದು ಮರ್ಯಾದೆ ಕೊಟ್ಟು ಮಾತನಾಡುತ್ತಿದ್ದ ಪೊಲೀಸರು ಕೂಡಾ ಎಲ್ಲಾ ಆರೋಪಿಗಳನ್ನು ಮಾತನಾಡಿಸಿದಂತೆಯೇ ದರ್ಶನ್‌ ಅವರನ್ನೂ ಮಾತನಾಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..

ನಿತ್ಯ ದರ್ಶನ್‌ ವಿಚಾರಣೆ ನಡೆಸಲಾಗುತ್ತಿದ್ದು, ಹಲವಾರು ಪ್ರಶ್ನೆಗಳನ್ನು ಕೇಳಲಾಗುತ್ತಿದೆ.. ವಿಚಾರಣೆ ವೇಳೆ ದರ್ಶನ್‌ ತಲೆಬಗ್ಗಿಸಿಕೊಂಡು ಕೂರುತ್ತಿದ್ದಾರೆ ಎಂದು ತಿಳಿದುಬಂದಿದೆ..

 

Share Post