CrimeDistricts

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೇಣಿಗೆ ಶರಣು!; ಇಷ್ಟು ಸಣ್ಣ ಕಾರಣಕ್ಕೆ ಸಾಯಬೇಕಾ..?

ಚಿತ್ರದುರ್ಗ; ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಅವರ ತಂದೆ ಚಳಿಗೆ ಕಿವಿಗೆ ಸುತ್ತಿಕೊಳ್ಳುವ ಮಪ್ಲರ್‌ ಬಳಸಿ ನೇಣುಬಿಗಿದುಕೊಂಡಿದ್ದಾನೆ.. ಚಿತ್ರದುರ್ಗ ಜಿಲೆ ಹೊಳಲ್ಕೆರೆ ಜಿಲ್ಲೆ ರಂಗಾಪುರ ಗ್ರಾಮದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ..

ಇದನ್ನೂ ಓದಿ; ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಅಪಹರಣ!; ದಾರಿಮಧ್ಯೆ ತಪ್ಪಿಸಿಕೊಂಡಿದ್ದೇ ರೋಚಕ!

ಚಂದ್ರಶೇಖರ್‌ ಎಂಬುವರ ಪುತ್ರ 15 ವರ್ಷದ ಪ್ರಜ್ವಲ್‌ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ.. ಈ ಹೊಳಲ್ಕೆರೆಯ ವಾಗ್ದೇವಿ ಹೈಸ್ಕೂಲ್‌ನಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ.. ಆದ್ರೆ ಶಾಲೆಯಲ್ಲಿ ನಡೆಯುತ್ತಿದ್ದ ಕಿರು ಪರೀಕ್ಷೆಗೆ ಹಾಜರಾಗಿರಲಿಲ್ಲ.. ಕಾರಣವನ್ನೂ ಸರಿಯಾಗಿ ನೀಡಿರಲಿಲ್ಲ.. ಹೀಗಾಗಿ ಶಿಕ್ಷಕರು ಪೋಷಕರನ್ನು ಕರೆದುಕೊಂಡುಬರುವಂತೆ ಸೂಚನೆ ನೀಡಿದ್ದರು.. ಇದ್ರಿಂದ ವಿದ್ಯಾರ್ಥಿ ಪ್ರಜ್ವಲ್‌ ವಿಚಲಿತನಾಗಿದ್ದಾನೆ..

ಇದನ್ನೂ ಓದಿ; ಮಳೆಗಾಲದಲ್ಲಿ ಫುಡ್‌ ಪಾಯ್ಸನ್‌ ಆಗೋದು ಜಾಸ್ತಿ!; ಆಹಾರ ಸೇವನೆ ಬಗ್ಗೆ ಎಚ್ಚರಿಕೆ ಇರಲಿ..!

ಶಾಲೆಯಿಂದ ಮನೆಗೆ ಬಂದ ಪ್ರಜ್ವಲ್‌ ಓದಿಕೊಳ್ಳುತ್ತೇನೆ ಎಂದು ಕೊಠಡಿಗೆ ಹೋಗಿದ್ದಾನೆ.. ಬಾಗಿಲು ಮುಚ್ಚಿಕೊಂಡು ಮಪ್ಲರ್‌ ಬಳಸಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಹೊಳಲ್ಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Share Post