CrimeDistricts

ಮಲಗಿದ್ದ ತಾಯಿಯನ್ನು ಕೊಂದೇಬಿಟ್ಟ ಪಾಪಿ ಮಗ!

ಗದಗ; ಬುದ್ಧಿ ಮಾತು ಹೇಳಿದಳು ಎಂಬ ಕಾರಣಕ್ಕೆ ಪಾಪಿ ಮಗನೊಬ್ಬ ಮಲಗಿದ್ದ ತಾಯಿಯನ್ನೇ ಕೊಂದಿದ್ದಾನೆ.. ಗದಗ ನಗರದ ದಾಸರ ಓಣಿಯಲ್ಲಿ ಈ ಪೈಶಾಚಿಕ ಕೃತ್ಯ ಎಸಗಲಾಗಿದೆ.. 85 ವರ್ಷದ ವೃದ್ಧೆ ಶಾರದಮ್ಮ ಅಗಡಿ ಎಂಬಾಕೆಯೇ ಕೊಲೆಯಾದವರು..

ಇದನ್ನೂ ಓದಿ; ಅಳಿಯ ಮನೆಗೆ ಬಂದಿದ ನಿವೃತ್ತ ಶಿಕ್ಷಕಿಯನ್ನು ಕಚ್ಚಿ ಸಾಯಿಸಿದ ನಾಯಿಗಳು!

ಶಾರದಮ್ಮ ಅವರ ಪುತ್ರ ಸಿದ್ದಲಿಂಗ ಅಗಡಿ ಪಕ್ಕದ ಮನೆಯವರ ಜೊತೆ ಜಗಳವಾಡಿದ್ದ.. ಈ ವೇಳೆ ಜಗಳ ಬಿಡಿಸಲು ಬಂದ ತಾಯಿ ನನ್ನ ಮಗನ ತಲೆ ಸರಿಯಿಲ್ಲ ಬಿಡಿ ಎಂದು ಪಕ್ಕದ ಮನೆಯವರನ್ನು ಬೇಡಿಕೊಂಡಿದ್ದಳು.. ಈ ಮೂಲಕ ಪಕ್ಕದವರ ಹೊಡೆತದಿಂದ ಮಗನನ್ನು ತಪ್ಪಿಸಿದ್ದಳು.. ನಂತರ ತಾಯಿ ಮಗನಿಗೆ ಬುದ್ಧಿ ಹೇಳಿದ್ದರು.. ಇದರಿಂದ ಆಕ್ರೋಶಗೊಂಡಿದ್ದ ಮಗ ಸಿದ್ದಲಿಂಗ, ಮಲಗಿದ್ದ ತಾಯಿಯನ್ನು ಕೊಂದಿದ್ದಾನೆ..

ಇದನ್ನೂ ಓದಿ; ಇಂದು ಸಿದ್ದರಾಮಯ್ಯ ಕೇಸ್‌ ವಿಚಾರಣೆ; ಸಿಎಂಗಿರುವ ಆಯ್ಕೆಗಳೇನು..?

ತಾಯಿಯನ್ನು ಕೊಂದ ನಂತರ ಆರೋಪಿ ತನ್ನ ಸಹೋದರಿಯರಿಗೆ ಕರೆ ಮಾಡಿ ತಾಯಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾನೆ.. ಇವರು ಮಾನಸಿನ ಅಸ್ವಸ್ಥನಾಗಿದ್ದರಿಂದ ಮೊದಲಿಗೆ ಅಕ್ಕಂದಿರು ಆತನ ಮಾತನನ್ನು ನಂಬಿಲ್ಲ.. ಆದ್ರೆ ಪೊಲೀಸರು ಮಾಹಿತಿ ನೀಡಿದ ಮೇಲೆ ಸಹೋದರಿಯರು ಸ್ಥಳಕ್ಕೆ ಬಂದಿದ್ದಾರೆ..

Share Post