BengaluruCrime

ಅಳಿಯ ಮನೆಗೆ ಬಂದಿದ ನಿವೃತ್ತ ಶಿಕ್ಷಕಿಯನ್ನು ಕಚ್ಚಿ ಸಾಯಿಸಿದ ನಾಯಿಗಳು!

ಬೆಂಗಳೂರು; ಅಳಿಯ ಮನೆಗೆ ಅತಿಥಿಯಾಗಿ ಬಂದಿದ್ದ ನಿವೃತ್ತ ಶಿಕ್ಷಕಿಯನ್ನು ಬೀದಿ ನಾಯಿಗಳ ಗುಂಪು ಕಚ್ಚಿ ಸಾಯಿಸಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ಬೆಂಗಳೂರಿನ ಜಾಲಹಳ್ಳಿ ಈಸ್ಟ್‌ ವಾಯುಪಡೆ ವಸತಿ ಸಮುಚ್ಚಯದಲ್ಲಿ ಈ ದುರಂತ ನಡೆದಿದೆ..

ಇದನ್ನೂ ಓದಿ; ಸಿನಿಮಾ ಕೊರಿಯೋಗ್ರಾಫರ್‌ ನವ್ಯಾ ಬರ್ಬರ ಹತ್ಯೆ; ಕಂಪ್ಲೀಟ್‌ ಡಿಟೇಲ್ಸ್‌!

ಬಿಹಾರ ಮೂಲದ ನಿವೃತ್ತ ಶಿಕ್ಷಕಿ 76 ವರ್ಷದ ರಾಜ್‌ ದುಲ್ಹಾರಿಯಾ ಸಿನ್ಹಾ ಎಂಬಾಕೆಯೇ ನಾಯಿ ದಾಳಿಗೆ ಸಾವನ್ನಪ್ಪಿದ ವೃದ್ಧ ಮಹಿಳೆ.. ಈಕೆ ಮಗಳು ಹಾಗೂ ಅಳಿಯ ಪೂರ್ವ ಏರ್‌ಫೋರ್ಸ್‌ನ 7ನೇ ರೆಸಿಡೆನ್ಸಿ ಚಾಂಪ್‌ ವಸತಿ ಸಮುಚ್ಚಯದಲ್ಲಿ ವಾಸವಿದ್ದಾರೆ.. ರಾಜ್‌ ದುಲ್ಹಾರಿಯಾ ಸಿನ್ಹಾ ಮಗಳು ಹಾಗೂ ಅಳಿಯನನ್ನು ನೋಡಲು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದರು.. ನಿನ್ನೆ ಬೆಳಗ್ಗೆ ವಾಯುವಿಹಾರ ಮಾಡುತ್ತಿದ್ದಾಗ ಈ ವೃದ್ಧೆ ಮೇಲೆ ನಾಯಿಗಳ ಹಿಂಡು ದಾಳಿ ಮಾಡಿವೆ..

ಇದನ್ನೂ ಓದಿ; ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

10ಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ ನಡೆಸಿ ಮಹಿಳೆಯನ್ನು ಸಾಯಿಸಿವೆ.. ತಲೆ, ಹೊಟ್ಟೆ ಹಾಗೂ ಕೈಕಾಲುಗಳನ್ನು ಕಚ್ಚಿರುವುದರಿಂದ ತೀವ್ರ ರಕ್ತಸ್ರಾವವಾಗಿ ಮಹಿಳೆ ಸಾವನ್ನಪ್ಪಿದ್ದಾಳೆ.. ಈಕೆ ಅಳಿತ ಅಮಿತ್‌ ಕುಮಾರ್‌ ವಾಯಪಡೆಯಲ್ಲಿ ಸೇವೆ ಸಲ್ಲಿಸುತ್ತಾರೆ ಎಂದು ತಿಳಿದುಬಂದಿದೆ..

Share Post