CrimeNational

ಶ್ರದ್ಧಾ ಮರ್ಡರ್‌ ಕೇಸ್‌; ಕೋರ್ಟ್‌ ಮುಂದೆ ತಪ್ಪೊಪ್ಪಿಕೊಂಡ ಅಫ್ತಾಬ್‌

ನವದೆಹಲಿ; ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್‌ನನ್ನು ಇಂದು ದೆಹಲಿಯ ಸಾಕೇತ್‌ ಕೋರ್ಟ್‌ಗೆ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಕೋರ್ಟ್‌ ಮುಂದೆ ಆರೋಪಿ ಅಫ್ತಾಬ್‌ ತಪ್ಪೊಪ್ಪಿಕೊಂಡಿದ್ದಾನೆ. ತಾನೇ ಶ್ರದ್ಧಾಳನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಈ ವೇಳೆ ಅಕಸ್ಮಾತ್ತಾಗಿ ನಾನು ಶ್ರದ್ಧಾಳನ್ನು ಕೊಲೆ ಮಾಡಿದ್ದೇನೆ. ಈ ಘಟನೆ ಬಗ್ಗೆ ನನಗೂ ತೀವ್ರ ಬೇಸರವಿದೆ. ಈ ಪ್ರಕರಣ ಸಂಬಂಧ ತನಿಖೆಗೆ ನಾನು ಸೂಕ್ತ ಸಹಕಾರ ನೀಡುತ್ತೇನೆ ಎಂದು ಆರೋಪ ಅಫ್ತಾಬ್‌ ಕೋರ್ಟ್‌ ಮುಂದೆ ಹೇಳಿದ್ದಾನೆ.

Share Post