CrimeNational

ಮಂಕಿ ಕ್ಯಾಪ್‌ ಧರಿಸಿ ಬಂದ ಚಾಕುವಿನಿಂದ ದಾಳಿ!; ಉದ್ಯಮಿ ಮನೆಯಲ್ಲಿ ನಡೆದಿದ್ದೇನು..?

ತಿರುಪತಿ; ಮಂಕಿ ಕ್ಯಾಪ್‌ ಧರಿಸಿ ಬಂದಿದ್ದ ಆಗಂತುಕನೊಬ್ಬ ಉದ್ಯಮಿ ಮನೆಗೆ ನುಗ್ಗಿ ಸಿಕ್ಕಸಿಕ್ಕವರ ಮೇಲೆ ಕತ್ತಿಯಿಂದ ದಾಳಿ ಮಾಡಿದ್ದಾರೆ.. ಘಟನೆಯಲ್ಲಿ ಓರ್ವ ವೃದ್ಧೆ ಸಾವನ್ನಪ್ಪಿದ್ದಾಳೆ.. ತಿರುಪತಿಯಲ್ಲಿ ಈ ಕೃತ್ಯ ಎಸಗಲಾಗಿದೆ.. ತಿರುಪತಿ ನಗರದ ತಿಲಕ್‌ ರಸ್ತೆಯ ಬಸವಯ್ಯ ಅಂಡ್‌ ಕೋ ಮಾಲೀಕ ಶ್ರೀನಿವಾಸ ರಾವ್‌ ಮನೆಗೆ ದುಷ್ಕರ್ಮಿ ನುಗ್ಗಿದ್ದು, ಮನೆಯಲ್ಲಿದ್ದ ಶ್ರೀನಿವಾಸ ರಾವ್‌ ತಾಯಿ ಜಯಲಕ್ಷ್ಮೀ, ಪತ್ನಿ ಸುರಕ್ಷಾ ಹಾಗೂ ಪುತ್ರಿಯರಾದ ಪ್ರೇರಣಾ, ನಿಯತಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಾನೆ..

ಇದನ್ನೂ ಓದಿ; ಬೆಲ್ಲ ಚರ್ಮದ ಕಾಂತಿ ಹೆಚ್ಚಿಸುತ್ತೆ..!; ಯೌವನವಾಗಿರಲು ಬೆಲ್ಲವೇ ಮದ್ದು!

ಜಯಲಕ್ಷ್ಮೀ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.. ಉಳಿದ ಮೂವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.. 14 ವರ್ಷದ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ.. ಆರೋಪಿ ಪಕ್ಕದ ಮನೆಯವನೇ ಎಂದು ಹೇಳಲಾಗುತ್ತಿದೆ.. ಯುವಕನ ಗುರುತು ಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.. ಯಾವ ಕಾರಣಕ್ಕೆ ಈ ದಾಳಿ ನಡೆದಿದೆ ಅನ್ನೋದು ಗೊತ್ತಾಗಿಲ್ಲ.. ಸ್ಥಳಕ್ಕೆ ಎಸ್ಪಿ ಸುಬ್ಬರಾಯುಡು ಹಾಗೂ ಶಾಸಕ ಅರಣಿ ಶ್ರೀನಿವಾಸ್‌ ಭೇಟಿ ನೀಡಿದ್ದರು..

ಇದನ್ನೂ ಓದಿ; ಮಾರುತಿ ಓಮ್ನಿ ಮೇಲೆ ಕುಸಿದ ಮಣ್ಣಿನ ಗುಡ್ಡ!; ಬದುಕಿ ಬಂದದ್ದೇ ಪವಾಡ..!

Share Post