CinemaNational

ಖ್ಯಾತ ತೆಲುಗು ನಟ, ಕನ್ನಡಿಗ ಶ್ರೀಕಾಂತ್‌ ದಾಂಪತ್ಯದಲ್ಲಿ ಬಿರುಕು..?

ಹೈದರಾಬಾದ್‌; ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ಡಿವೋರ್ಸ್‌ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಕೆಲ ತಿಂಗಳ ಹಿಂದೆಯಷ್ಟೇ ಸಮಂತಾ, ನಾಗಚೈತನ್ಯ ಡಿವೋರ್ಸ್‌ ಪಡೆದುಕೊಂಡಿದ್ದರು. ಹೀಗಿರುವಾಗಲೇ ಈಗ ಖ್ಯಾತ ನಟ ಹಾಗೂ ಕರ್ನಾಟಕ ಮೂಲದ ನಟ ಶ್ರೀಕಾಂತ್‌ ದಾಂಪತ್ಯದಲ್ಲೂ ಬಿರುಕುಂಟಾಗಿದೆ ಎಂದು ಹೇಳಲಾಗುತ್ತಿದೆ. ಶ್ರೀಕಾಂತ್‌ ಹಾಗೂ ಊಹಾ ದಂಪತಿ ಡಿವೋರ್ಸ್‌ಗೆ ರೆಡಿಯಾಗಿರುವ ಸುದ್ದಿ ಹರಿದಾಡುತ್ತಿದೆ.

25 ವರ್ಷಗಳಿಂದ ಜೊತೆಯಾಗಿದ್ದ ಈ ಜೋಡಿಗೆ ಮೂವರು ಮಕ್ಕಳಿದ್ದಾರೆ. ರೋಷನ್‌, ರೋಹನ್‌ ಹಾಗೂ ವೇದಾ ಎಂಬ ಹೆಸರಿನ ಮಕ್ಕಳಿದ್ದಾರೆ. ಊಹಾ ಕೂಡಾ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶ್ರೀಕಾಂತ್‌ ಕನ್ನಡದಲ್ಲೂ ಬಣ್ಣ ಹಚ್ಚಿದ್ದಾರೆ. ಆದ್ರೆ ಅವರು ಇತ್ತೀಚೆಗೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಕಾರಣದಿಂದಲೇ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ.

Share Post