CrimeDistricts

ಸರಳವಾಸ್ತು ಗುರೂಜಿ ಸಂಬಂಧಿಕರಿಗೂ ಆರೋಪಿಗಳಿಂದ ಜೀವ ಬೆದರಿಕೆ!

ಹುಬ್ಬಳ್ಳಿ; 2022ರಲ್ಲಿ ಸರಳವಾಸ್ತು ಚಂದ್ರಶೇಖರ್‌ ಗುರೂಜಿಯವರನ್ನು ಹುಬ್ಬಳ್ಳಿಯ ಹೋಟೆಲ್‌ ಒಂದರಲ್ಲಿ ಇಬ್ಬರು ದುಷ್ಕರ್ಮಿಗಳು ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದರು.. ಇದೀಗ ಅದೇ ಆರೋಪಿಗಳು ಗುರೂಜಿ ಸಂಬಂಧಿಕರಿಗೂ ಕೊಲೆ ಬೆದರಿಕೆ ಹಾಕುತ್ತಿದ್ದಾರೆ.. ಈ ಬಗ್ಗೆ ಗುರೂಜಿ ಸಂಬಂಧಿಕರಾದ ಉದ್ಯಮಿ ಸಂಜಯ್‌ ಅಂಗಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ..
ಕಳೆದ ಫೆಬ್ರವರಿ 4ರಂದು ಸಂಜಯ್‌ ಅವರು ತಮ್ಮ ಸಹೋದರಿ ಜೊತೆ ಹುಬ್ಬಳ್ಳಿ ಕೋರ್ಟ್‌ಗೆ ಆಗಮಿಸಿದ್ದರು.. ಇದೇ ವೇಳೆ ನ್ಯಾಯಾಂಗ ಬಂಧನದಲ್ಲಿರುವ ಇಬ್ಬರೂ ಆರೋಪಿಗಳನ್ನು ವಿಚಾರಣೆಗೆಂದು ಕೋರ್ಟ್‌ಗೆ ಕರೆತರಲಾಗಿತ್ತು.. ಈ ವೇಳೆ ಆರೋಪಿಗಳು ನೀವು ಕೋರ್ಟ್‌ನಲ್ಲಿ ಕಂಡು ಬಂದರೆ ಎತ್ತಿಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರಂತೆ.. ಅಷ್ಟೇ ಅಲ್ಲದೆ, ನಾವು ಒಂದು ದಿನದ ಮಟ್ಟಿಗೆ ಹೊರಗೆ ಬಂದರೂ ಯಾರನ್ನೂ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಸಂಜಯ್‌ ಆರೋಪ ಮಾಡಿದ್ದಾರೆ..
ಹುಬ್ಬಳ್ಳಿನ ಉಣಕಲ್‌ ಕೆರೆ ಬಳಿ ಇರುವ ಪ್ರೆಸಿಡೆಂಟ್‌ ಹೋಟೆಲ್‌ ರಿಸೆಪ್ಷನ್‌ನಲ್ಲಿ 2022 ಜುಲೈ 5ರಂದು ಗುರೂಜಿಯನ್ನು ಕೊಲೆ ಮಾಡಲಾಗಿತ್ತು. ಆಶೀರ್ವಾದ ಪಡೆಯುವುದಕ್ಕಾಗಿ ಬಂದಿದ್ದ ಇಬ್ಬರು ಮೊದಲೇ ಪ್ಲ್ಯಾನ್‌ ಮಾಡಿದಂತೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದರು..

Share Post