CrimeDistricts

ರೌಡಿ ಶೀಟರ್‌ ಮೇಲೆ ಗುಂಡಿನ ದಾಳಿ; ಭೀಮಾ ತೀರದಲ್ಲಿ ಮತ್ತೆ ಹರಿಯಿತು ರಕ್ತ!

ವಿಜಯಪುರ; ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ.. ರೌಡಿ ಶೀಟರ್‌ ಒಬ್ಬನ ಮೇಲೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.. ಇದರಿಂದಾಗಿ ಭೀಮಾ ತೀರದಲ್ಲಿ ಮತ್ತೆ ಆತಂಕ ಮನೆ ಮಾಡಿದೆ.. 

ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ವೀರಗಿ ರಸ್ತೆ ಬಳಿ ಅಶೋಕ್‌ ಮಲ್ಲಪ್ಪ ಗಂಟಗಲ್ಲಿ ಎಂಬಾತನ ಮೇಲೆ ಗುಂಡಿನ ದಾಳಿ ಮಾಡಿದಲಾಗಿದೆ.. ಅಶೋಕ್‌ ಕೊಲೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ.. ಜೈಲಿನಲ್ಲಿದ್ದ ಆತ ಕೆಲ ದಿನಗಳ ಹಿಂದಷ್ಟೇ ಪೆರೋಲ್‌ ಮೇಲೆ ಹೊರಬಂದಿದ್ದ ಎಂದು ತಿಳಿದುಬಂದಿದೆ..

ನಿನ್ನೆ ಆತ ತನ್ನ ಗ್ರಾಮದಿಂದ ಚಡಚಣ ಪಟ್ಟಣಕ್ಕೆ ಬರುತ್ತಿದ್ದ.. ಈ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾರೆ.. ಹಳೆಯ ದ್ವೇಷದಿಂದ ಈ ಕೃತ್ಯ ಎಸಗಲಾಗಿದೆ.. ಮೃತ ಅಶೋಕ್‌ ಪತ್ನಿ ಚಡಚಣ ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯೆಯಾಗಿದ್ದಾರೆ..

Share Post