Crime

ನೀವು ಕಳ್ಳರಾಗಿದ್ದರೆ ಮಾತ್ರ ಕಾಂಗ್ರೆಸ್‌ಗೆ ಮತ ಹಾಕ್ತೀರ : ಕಂಗನಾ ರಣಾವತ್

ನವದೆಹಲಿ : ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವ ಕಂಗನಾ ರಣಾವತ್‌ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಬರೆದುಕೊಂಡಿರುವ ಕಂಗನಾ ರಣಾವತ್‌ ವಿವಾದಾತ್ಮಕ ಹೇಳಿಕೆಯೊಂದನ್ನು ಹೇಳಿದ್ದಾರೆ.

ಜೀವನದ ಬಗ್ಗೆ ನಾಲ್ಕು ನಿಯಮಗಳನ್ನು ನೆನಪಿಟ್ಟುಕೊಳ್ಳಿ

೧. ಕಳ್ಳರು ಕಳ್ಳರಿಗೆ ಸಪೋರ್ಟ್‌ ಮಾಡ್ತಾರೆ.

೨. ತಮ್ಮನ್ನು ತಾವು ನಂಬದವರನ್ನು ದೇವರನ್ನು ನಂಬುವುದಿಲ್ಲ

೩. ನಿಮ್ಮ ಅಂತರಂಗದ ಪ್ರತಿಬಿಂಬವಾಗಿರುವ ಗುರುವನ್ನು ಕಾಣುವಿರಿ. ನೀವು ಸತ್ಯವಂತರಾಗಿದ್ದರೆ ಸತ್ಯವಂತ ಗುರುಗಳನ್ನೇ ಆರಿಸುವಿರಿ, ನೀವು ಒಳ್ಳೆಯವರಾಗಿಲ್ಲವೆಂದರೆ ವಂಚಕರನ್ನೇ ಗುರುಗಳೆಂದು ಆರಿಸಿಕೊಳ್ಳುವಿರಿ.

೪. ನೀವು ಕಳ್ಳರಾಗಿದ್ದರೆ ಮಾತ್ರ ಕಾಂಗ್ರೆಸ್‌ ಅನ್ನು ಇಷ್ಟಪಡ್ತೀರ. ನೀವು ನಿಜವಾದ ರಾಷ್ಟ್ರವಾದಿಯಾಗಿದ್ದರೆ ಬಿಜೆಪಿಗೆ ಮತ ಹಾಕುವಿರಿ ಎಂದು ಹೇಳಿದ್ದಾರೆ.

ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಬಿಜೆಪಿ ಪರ ಮತಯಾಚನೆಗೆ ಕಂಗನಾ ನಿಂತಂತೆ ಕಾಣುತ್ತಿದ್ದಾರೆ.

Share Post