BengaluruCrime

ರೇಣುಕಾಸ್ವಾಮಿಗೆ 8 ಬಾರಿ ಕರೆಂಟ್‌ ಶಾಕ್‌!; 39 ಗಾಯ, 7 ಕಡೆ ಮೂಳೆ ಮುರಿದ ಹಂತಕರು!

ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ದರ್ಶನ್‌ ಅಂಡ್‌ ಗ್ಯಾಂಗ್‌ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವುದು ಗೊತ್ತೇ ಇದೆ.. ಅಧಿಕೃತ ಮಾಹಿತಿ ಪ್ರಕಾರ, ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ನೀಡಿ ಚಿತ್ರಹಿಂಸೆ ಮಾಡಲಾಗಿದೆ.. ಆತನ ದೇಹದ ಮೇಲೆ 39 ರಕ್ತಸಿಕ್ತ ಗಾಯಗಳು ಕೂಡಾ ಆಗಿವೆ ಎಂದು ಮರಣೋತ್ತರ ಪರೀಕ್ಷೆ ರಿಪೋರ್ಟ್‌ ಹೇಳುತ್ತಿದೆ..

ಹೌದು, ಪೋರ್ಸ್‌ ಮರ್ಟಂ ರಿಪೋರ್ಟ್‌ ಪ್ರಕಾರ, ರೇಣುಕಾಸ್ವಾಮಿ ದೇಹದ ಮೇಲೆ ಒಟ್ಟು 39 ಗಾಯಗಳಾಗಿವೆ.. ದೇಹದ 30 ಪರ್ಸೆಂಟ್‌ ಸುಟ್ಟುಹೋಗಿದೆ.. ರೇಣುಕಾಸ್ವಾಮಿ ದೇಹದ 8 ಕಡೆ ಎಲೆಕ್ಟ್ರಿಕ್‌ ಶಾಕ್‌ ನೀಡಲಾಗಿದೆ.. ಹಂತಕರು ಹೊಡೆದಿರೋ ಏಟುಗಳಿಗೆ ರೇಣುಕಾಸ್ವಾಮಿ ದೇಹದ 7 ಕಡೆ ಮೂಳೆ ಮುರಿದಿದೆ.. 13 ಕಡೆ ಮೂಳೆ ಏರ್‌ ಕ್ರಾಕ್‌ ಆಗಿದೆ..

ಕಬ್ಬಿಣದ ರಾಡ್‌, ಮರದ ವಸ್ತುಗಳಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದೆ.. ಇದರ ಜೊತೆಗೆ ಕಾಲಿನಿಂದ ಒದೆಯಲಾಗಿದೆ. ಕರೆಂಟ್‌ ಶಾಕ್‌ ಕೂಡಾ ನೀಡಿ ಚಿತ್ರಹಿಂಸೆ ನೀಡಿದ್ದರಿಂದಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ..

 

Share Post