CrimeNational

ಜಮೀನು ವಿಚಾರವಾಗಿ ಜಗಳ; ಸಹೋದರ ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಲೆ!

ಜೈಪುರ; ಆಸ್ತಿಗಾಗಿ ಸಹೋದರರು ಜಗಳ  ಮಾಡುವುದು ಸಾಮಾನ್ಯ. ಕೆಲವೊಮ್ಮೆ ಇದು ಕೊಲೆ ಹಂತಕ್ಕೂ ತಲುಪಿಬಿಡುತ್ತದೆ. ರಾಜಸ್ಥಾನದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಸ್ವಂತ ಸಹೋದರನ್ನೇ ವ್ಯಕ್ತಿಯೊಬ್ಬ ಟ್ರ್ಯಾಕ್ಟರ್‌ ಹರಿಸಿ ಕೊಲೆ ಮಾಡಿದ್ದಾನೆ. 

ರಾಜಸ್ಥಾನದ ಭರತ್‌ಪುರದಲ್ಲಿ ಈ ಕೃತ್ಯ ಎಸಗಲಾಗಿದೆ. ಇಲ್ಲಿ ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ. ಈ ವೇಳೆ ನಿರ್ಪತ್‌ ಎಂಬಾತನ ಮೇಲೆ ಆತನ ಸಹೋದರ ದಾಮೋದರ್‌ ಎಂಟು ಬಾರಿ ಟ್ರ್ಯಾಕ್ಟರ್‌ ಅನ್ನು ಹಿಂದಕ್ಕೆ ಮುಂದಕ್ಕೆ ಓಡಿಸಿದ್ದಾನೆ. ಇದರಿಂದಾಗಿ ನಿರ್ಪತ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸದ್ಯ ಪೊಲೀಸರು ಆರೋಪಿ ದಾಮೋದರನನ್ನು ಬಂಧಿಸಿದ್ದಾರೆ. ಸಹೋದರ ಮೇಲೆ ಟ್ರ್ಯಾಕ್ಟರ್‌ ಓಡಿಸುತ್ತಿದ್ದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇತರರು ಈ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಡೆಯುವುದನ್ನು ಬಿಟ್ಟು ಸಾರ್ವಜನಿಕರು ವಿಡಿಯೋ ಮಾಡಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

Share Post