Crime

ಅಗಲಿದ ಯುವರತ್ನನ ಕುಟುಂಬಸ್ಥರಿಗೆ ಪ್ರಭಾಸ್‌ ಸಾಂತ್ವನ

ಬೆಂಗಳೂರು: ಕರುನಾಡಿನ ಯುವರತ್ನ ಪುನೀತ್ ರಾಜ್​ಕುಮಾರ್ ಇಂದಿಗೆ ನಮ್ಮನ್ನಗಲಿ ಎರಡು ತಿಂಗಳು ಕಳೆದಿವೆ. ಈ ಆಘಾತದಿಂದ ಕನ್ನಡ ನಾಡಿನ ಜನತೆ ಇನ್ನೂ ಹೊರಬಂದಿಲ್ಲ. ಅಭಿಮಾನಿಗಳಿಗೇ ಇಷ್ಟು ಕಷ್ಟವಾಗ್ತಿದ್ರೆ ಕುಟುಂಬಸ್ಥರ ಪರಿಸ್ಥಿತಿ ಏನು? ಈಗಾಗಲೇ ದಕ್ಷಿಣ ಭಾರತದ ಚಿತ್ರರಂಗದ ಅನೇಕ ಗಣ್ಯರು ಪುನೀತ್‌ ರಾಜ್‌ಕುಮಾರ್‌ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಇಂದು ಕೂಡ ಟಾಲಿವುಡ್‌ನ ನಂಬರ್‌ ಒನ್‌ ನಟ ಪ್ರಭಾಸ್‌ ಕೂಡ ಇಂದು ಸದಾಶಿವನಗರದಲ್ಲಿರುವ ಪುನೀತ್‌ ರಾಜ್‌ಕುಮಾರ್‌ ನಿವಾಸಕ್ಕೆ ಭೇಟಿ ನೀಡಿ ಅಶ್ವಿನಿ ಪುನೀತ್‌ ಅವರಿಗೆ ಸಾಂತ್ವನ ಹೇಳಿದ್ರು. ಈ ವೇಳೆ ತನ್ನ ಹುಟ್ಟು ಹಬ್ಬಕ್ಕೆ ಕರೆ ಮಾಡಿ ವಿಶ್‌ ಮಾಡಿದ್ರು ಎಂಬುದನ್ನು ಪ್ರಭಾಸ್‌ ನೆನೆಸಿಕೊಂಡು ದುಃಖತಪ್ತರಾದರಂತೆ. ಶಿವಣ್ಣ ಮೈಸೂರಿನ ಶಕ್ತಿಧಾಮಕ್ಕೆ ತೆರಳಿರುವ ಹಿನ್ನೆಲೆ ಅವರ ಭೇಟಿ ಸಾಧ್ಯವಾಗಲಿಲ್ಲ. ರಾಘವೇಂದ್ರ ರಾಜ್‌ಕುಮಾರ್‌ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಅವರಿಗೂ ಸಮಾಧಾನದ ಮಾತುಗಳನ್ನಾಡಿ ವಾಪಸ್ಸಾಗಿದ್ದಾರೆ.

Share Post