CrimeDistricts

ಮನೆ ಪಕ್ಕದ ಬಾವಿಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಬಾಲಕಿಯರ ದಾರುಣ ಸಾವು!

ಕೊಪ್ಪಳ; ಮನೆ ಪಕ್ಕದಲ್ಲೇ ಇದ್ದ ಬಾವಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಜಾರಿ ಬಿದ್ದು ಇಬ್ಬರು ಬಾಲಕಿಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಕೊಪ್ಪಳ ಜಿಲ್ಲೆ ಜಿನ್ನಾಪೂರ ತಾಂಡಾದ ಹೊರವಲಯದ ಜಮೀನನಲ್ಲಿ ಈ ದುರ್ಘಟನೆ ನಡೆದಿದೆ.. ಜಮೀನಿನಲ್ಲೇ ಮನೆ ಇದ್ದು, ಪಕ್ಕದಲ್ಲೇ ಬಾವಿ ಇದೆ.. ಬಿಸಿಲಿನ ಹಿನ್ನೆಲೆಯಲ್ಲಿ ಬಾವಿಯಲ್ಲಿ ಸ್ನಾನ ಮಾಡಲು ಇಬ್ಬರು ಬಾಲಕಿಯರು ಹೋಗಿದ್ದಾಗ ಈ ದುರ್ಘಟ ನಡೆದಿದೆ..

ಸೌಂದರ್ಯ (10), ಹಾಗೂ ಲಕ್ಷ್ಮಿ (10) ಮೃತ ಬಾಲಕಿಯರಾಗಿದ್ದಾರೆ.  ಸೌಂದರ್ಯ ಜಿನ್ನಾಪುರ ದೊಡ್ಟ ತಾಂಡಾದ ರತ್ನಪ್ಪ ಹಾಗೂ ಮಂಜುಳಾ ದಂಪತಿಗಳ ಮಗಳಾಗಿದ್ದರೆ,  ಲಕ್ಷ್ಮಿ ಎಂಬಾಕೆ ಶರಣಪ್ಪ ಸರೋಜಮ್ಮ ದಂಪತಿಯ ಪುತ್ರಿ ಎಂದು ಗೊತ್ತಾಗಿದೆ.. ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾಲ್ವರು ಬಾಲಕಿಯರು ಬಾವಿಯಲ್ಲಿ ಸ್ನಾನಕ್ಕೆ ಇಳಿದಿದ್ದರು.. ಇದೇ ವೇಳೆ ಇಬ್ಬರು ಬಾಲಕಿಯರು ಕಾಲು ಜಾರಿಬಿದ್ದಿದ್ದಾರೆ.. ಇದನ್ನು ನೋಡಿ ಉಳಿದ ಬಾಲಕಿಯರು ಜೋರಾಗಿ ಕೂಗಾಡಿದ್ದಾರೆ.. ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಬಂದು ಬಾಲಕಿಯರನ್ನು ಉಳಿಸಲು ಪ್ರಯತ್ನ ಮಾಡಿದ್ದಾರೆ.. ಆದ್ರೆ ಅಷ್ಟರಲ್ಲಾಗಲೇ ಇಬ್ಬರೂ ಮೃತಪಟ್ಟಿದ್ದರು..

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ಕೊಟ್ಟು ಬಾಲಕಿಯರ ಮೃತದೇಹವನ್ನು ಹೊರ ತೆಗೆದಿದ್ದಾರೆ.

Share Post