Crime

ಆಂಧ್ರ ಮುಖ್ಯಮಂತ್ರಿ ಜಗನ್‌ ಹತ್ಯೆ ಬೆದರಿಕೆ; ಪವನ್‌ ಕಲ್ಯಾಣ್‌ ಅಭಿಮಾನಿ ಅರೆಸ್ಟ್‌

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ವಿರುದ್ಧ ನಟ ಹಾಗೂ ಜನಸೇನಾ ಪಾರ್ಟಿ ಅಧ್ಯಕ್ಷ ಪವನ್‌ ಕಲ್ಯಾಣ್‌  ಆಕ್ರೋಶ ವ್ಯಕ್ತಪಡಿಸುವುದು ನೋಡೇ ಇರ್ತೀರಿ. ಇಬ್ಬರೂ ಹಾವು-ಮುಂಗಸಿ ತರಾ ಇದ್ದಾರೆ. ಇದರ ನಡುವೆಯೇ ಪವನ್‌ ಕಲ್ಯಾಣ್‌ ಅಭಿಮಾನಿಯೊಬ್ಬ ಸಿಎಂ ಜಗನ್‌ಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಇದ್ರಿಂದಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಪವನ್‌ ಕಲ್ಯಾಣ್‌ ಅವರ ಜನಸೇನಾ ಪಾರ್ಟಿ ಬೆಂಬಲಿಗನಾಗಿರುವ ರಾಜಮಹೇಂದ್ರವರಂ ನಿವಾಸಿಯಾಗಿರುವ ರಾಜಾಪಲೇಮ್‌ ಎಂಬಾತನೇ ಜಗನ್‌ಗೆ ಜೀವಬೆದರಿಕೆ ಹಾಕಿ ಕಂಬಿ ಎಣಿಸುತ್ತಿರುವಾತ. ಈತ ಇತ್ತೀಚೆಗೆ ಸರಣಿ ಟ್ವೀಟ್‌ ಮಾಡಿದ್ದ. ಆಂಧ್ರ ಪ್ರದೇಶ ಸಿಎಂ ಜಗನ್‌ಮೋಹರ್‌ ರೆಡ್ಡಿಯನ್ನು ಬಾಂಬ್‌ ಸ್ಫೋಟಿಸಿ ಹತ್ಯೆ ಮಾಡುವುದಾಗಿ ಟ್ವೀಟ್‌ನಲ್ಲಿ ಹೇಳಿದ್ದ. ಕೆಲ ಸಮಯದ ನಂತರ ಆತ ತನ್ನ ಟ್ವೀಟ್‌ಗಳನ್ನು ಡಿಲೀಟ್‌ ಮಾಡಿ ತಲೆಮರೆಸಿಕೊಂಡಿದ್ದ.

ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈಗ ಟ್ವೀಟ್‌ ಮಾಡಿದ ಐಪಿ ಅಡ್ರೆಸ್‌ ಆಧಾರದ ಮೇಲೆ ಆರೋಪಿಯ ವಿವರಗಳನ್ನು ಸಂಗ್ರಹಿಸಿ, ಆತನನ್ನು ಬಂಧಿಸಿದ್ದಾರೆ.

Share Post