BengaluruCrime

ಮಹಾಲಕ್ಷ್ಮೀ ಕೊಲೆ ಆರೋಪಿ ಸುಳಿವು ಪತ್ತೆ!; ಯಾರು ಆತ..?

ಬೆಂಗಳೂರು; ವೈಯಾಲಿಕಾವಲ್‌ನಲ್ಲಿ ಕೊಲೆಯಾದ ಮಹಾಲಕ್ಷ್ಮೀ ಹಂತಕನ ಸುಳಿವು ಪೊಲೀಸರಿಗೆ ಸಿಕ್ಕಿದೆ.. ಶೀಘ್ರದಲ್ಲೇ ಆತನ ಬಂಧನವಾಗಲಿದೆ ಎಂದು ಗೊತ್ತಾಗಿದೆ.. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಅವರೇ ಮಾಹಿತಿ ಕೊಟ್ಟಿದ್ದಾರೆ..
ಬೆಂಗಳೂರಿನಲ್ಲಿ ಮಾತನಾಡಿರುವ ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಅವರು, ಮಹಾಲಕ್ಷ್ಮೀ ಅವರನ್ನು ಕೊಲೆ ಮಾಡಿ 50 ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿ ಇಡಲಾಗಿತ್ತು.. ಪ್ರಕರಣ ಸಂಬಂಧ ಈಗಾಗಲೇ ಹಲವರನ್ನು ವಿಚಾರಣೆಗೊಳಪಡಿಸಿದ್ದೇವೆ.. ಕೊಲೆಗಾರ ಯಾರು ಅನ್ನೋದು ಗೊತ್ತಾಗಿದೆ.. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುತ್ತದೆ ಎಂದು ಹೇಳಿದ್ದಾರೆ..
ಮಹಾಲಕ್ಷ್ಮೀಯನ್ನು ಕೊಂದಾತನ ಮಾಹಿತಿ ಸಿಕ್ಕಿದೆ.. ಆರೋಪಿ ಹೊರ ರಾಜ್ಯದವನಾಗಿದ್ದಾನೆ. ಆತ ಕೆಲಸ ಅರದಿ ಬೆಂಗಳೂರಿಗೆ ಬಂದಿದ್ದು, ಇಲ್ಲೇ ವಾಸವಿದ್ದ.. ಸದ್ಯ ಆತ ನಾಪತ್ತೆಯಾಗಿದ್ದಾರೆ.. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುತ್ತದೆ.. ನಂತರ ಪ್ರಕರಣದ ಬಗ್ಗೆ ವಿವರವಾದ ಮಾಹಿತಿ ನೀಡಲಾಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ತಿಳಿಸಿದ್ದಾರೆ..

 

Share Post