CrimeDistricts

ತಂದೆ-ತಾಯಿ ನಿತ್ಯ ಜಗಳ!; ಬೇಸತ್ತು ಯುವಕ ಆತ್ಮಹತ್ಯೆ!

ಕೊಳ್ಳೇಗಾಲ; ಮನೆಯಲ್ಲಿ ಪೋಷಕರು ನದಿನವೂ ಜಗಳ ಮಾಡಿಕೊಳ್ಳುವುದನ್ನು ನೋಡಲಾಗದೇ 26 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರ ಬಳಿ ಈ ಘಟನೆ ನಡೆದಿದೆ..
ಬೆಂಗಳೂರಿನ ನಾಯಂಡಳ್ಳಿ ನಿವಾಸಿಯಾಗಿರುವ ಶಿವಸ್ವಾಮಿ ಎಂಬುವವರ ಪುತ್ರ ಸಂದೀಪ್‌ ಕುಮಾರ್‌ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನು. ಇವರು ಮೂಲತಃ ದೊಡ್ಡಬಳ್ಳಾಪುರದವರು.. ಈಗ ಬೆಂಗಳೂರಿನಲ್ಲಿ ವಾಸವಿದ್ದಾರೆ.. ಶಿವಸ್ವಾಮಿ ಮಗ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.. ತಾಯಿ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ.. ತಂದೆ-ತಾಯಿ ನಡುವೆ ದಿನಾ ಜಗಳ ಆಗುತ್ತಿತ್ತು ಎನ್ನಲಾಗಿದೆ.. ಇದರಿಂದ ಕಿರಿಕಿರಿ ಅನುಭವಿಸಿದ್ದ ಸಂದೀಪ್‌ ಕುಮಾರ್‌ ಅಕ್ಟೋಬರ್‌ 2 ರಂದು ಮನೆ ಬಿಟ್ಟು ಹೋಗಿದ್ದಾನೆ..
ಬೈಕ್‌ ನಲ್ಲಿ ಹೋಗಿದ್ದ ಸಂದೀಪ್‌ ಕುಮಾರ್‌ ಶಿವಸಮುದ್ರದ ಕಾವೇರಿ ನದಿ ಬಳಿ ಬೈಕ್‌ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ನಿನ್ನೆ ಸಂಜೆ ಈತನ ಮೃತ ದೇಹ ಶಿವನಸಮುದ್ರದ ರಂಗನಾಥಸ್ವಾಮಿ ದೇವಾಲಯದ ಹಿಂಭಾಗ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.

Share Post