BengaluruCrime

ಬೆಂಗಳೂರಲ್ಲಿ ಮಿಸ್ಡ್‌ಕಾಲ್‌ ಮಾಯಾಂಗನೆ!; ಯಾಮಾರಿದ್ರೆ ಮುಗೀತು!

ಬೆಂಗಳೂರು; ಬೆಂಗಳೂರಲ್ಲಿ ಮಿಸ್ಡ್‌ ಕಾಳ್‌ ಮಾಯಾಂಗನೆ ಒಬ್ಬಳಿದ್ದಾಳೆ.. ಆಕೆ ಸಿಕ್ಕ ಸಿಕ್ಕ ನಂಬರ್‌ಗಳಿಗೆ ಮಿಸ್ಡ್‌ ಕಾಲ್‌ ಕೊಡ್ತಾಳೆ.. ಯಾರು ಅಂತ ವಾಪಸ್‌ ಮಾಡಿದರೆ ಪ್ರೀತಿಯ ನಾಟಕವಾಡುತ್ತಾಳೆ.. ಬಲೆಗೆ ಬೀಳಿಸಿಕೊಂಡು ಮನೆ ಮಠ ಮಾರಿಕೊಳ್ಳುವಂತೆ ಮಾಡುತ್ತಾಳೆ.. ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರು ಇಂತಹದ್ದೊಂದು ಹನಿಟ್ರ್ಯಾಪ್‌ ಗ್ಯಾಂಗ್‌ ಒಂದನ್ನು ಬಂಧಿಸಿದ್ದಾರೆ.. ಮದುವೆಯಾಗಿ ಮಕ್ಕಳಿರುವ ಮಹಿಳೆ ಐಶಾರಾಮಿ ಜೀವನ ನಡೆಸೋದಕ್ಕಾಗಿ ಹುಡುಗರನ್ನು ಬಲೆಗೆ ಬೀಳಿಸಿ, ಅವರಿಂದ ಸುಲಿಗೆ ಮಾಡುತ್ತಿದ್ದಳು.. ಈಕೆಗೆ ಒಂದು ಗ್ಯಾಂಗ್‌ ಸಪೋರ್ಟ್‌ ಮಾಡ್ತಿತ್ತು..

ಇದನ್ನೂ ಓದಿ; ಗುಂಡಿಕ್ಕಿ ಬಿಜೆಪಿ ಮುಖಂಡನ ಭೀಕರ ಹತ್ಯೆ!

ನಜ್ಮಾ ಕೌಸರ್‌, ಮಹಮದ್‌ ಆಶೀಕ್‌, ಖಲೀಲ್‌ ಬಂಧನಕ್ಕೊಳಗಾದವರು… ಈ ಮೂವರೂ ಸೇರಿಕೊಂಡು ಹನಿಟ್ರ್ಯಾಪ್‌ ದಂಧೆ ನಡೆಸುತ್ತಿದ್ದರು.. ಮೊದಲಿಗೆ ನಜ್ಮಾಕೌಸರ್‌ ಅನಾಮಿಕ ನಂಬರ್‌ಗಳಿಗೆ ಮಿಸ್ಡ್‌ ಕಾಲ್‌ ಕೊಡುತ್ತಿದ್ದಳು.. ಅವರು ವಾಪಸ್‌ ಮಾಡಿದರೆ ಅವರು ಯುವಕರೇ ಎಂದು ಖಾತ್ರಿ ಮಾಡಿಕೊಳ್ಳುತ್ತಿದ್ದಳು.. ಬೆಂಗಳೂರಿನವರೇ ಆಗಿದ್ದರೆ ಅವರನ್ನು ಪರಿಚಯ ಮಾಡಿಕೊಂಡು, ಮಿಸ್‌ ಆಗಿ ಬಂತು ಸಾರಿ ಎಂದು ಹೇಳಿ, ಸಲುಗೆಯಿಂದ ಮಾತನಾಡುತ್ತಿದ್ದಳು.. ಯುವಕರೂ ಅದಕ್ಕೆ ಮಾರುಹೋದರೆ ಚಾಟಿಂಗ್‌ ಮುಂದುವರೆಯುತ್ತಿತ್ತು.. ಬರಬರುತ್ತಾ ಕಷ್ಟ ಇದೆ ಸ್ವಲ್ಪ ಹಣ ಸಿಗುತ್ತಾ ಎಂದು ಕೇಳುತ್ತಿದ್ದಳು.. ಕೊಟ್ಟರೆ ಕೆಲ ದಿನಗಳ ನಂತರ ಅದನ್ನು ಹಿಂತಿರುಗಿಸುತ್ತಿದ್ದಳು.. ಹೀಗೆ ವಿಶ್ವಾಸ ಗಳಿಸುತ್ತಿದ್ದ ನಜ್ಮಾ ಕೌಸರ್‌, ಒಂದು ದಿನ ಕರೆ ಮಾಡಿ ಮನೆಯಲ್ಲಿ ಯಾರೂ ಇಲ್ಲ, ಮನೆಗೆ ಬಾ ಏಕಾಂತದಲ್ಲಿ ಕಾಲ ಕಳೆಯೋಣ ಎಂದು ಯುವಕನನ್ನು ಕರೆಯುತ್ತಿದ್ದಳು.. ಆಕೆಯ ಮಾತು ನಂಬಿ ಮನೆಗೆ ಹೋದರೆ ಸೀದಾ ಬೆಡ್‌ ರೂಮ್‌ಗೆ ಕರೆದೊಯ್ಯುತ್ತಿದ್ದಳು..

ಇದನ್ನೂ ಓದಿ; ಮುಳಬಾಗಿಲಿನಲ್ಲಿ ಶಿಕ್ಷಕಿಯ ಬರ್ಬರ ಹತ್ಯೆ!; ಕಾರಣ ಏನು..?

ಬೆಡ್‌ ರೂಮ್‌ನಲ್ಲಿ ಯುವಕ ಬಟ್ಟೆ ತೆಗೆಯೋಕೆ ಶುರು ಮಾಡುತ್ತಿದ್ದಂತೆ ಮಹಮದ್‌ ಆಶೀಕ್‌, ಖಲೀಲ್‌ ಎಂಟ್ರಿ ಆಗುತ್ತಿತ್ತು.. ಯಾರೋ ನೀನು..? ರೇಪ್‌ ಮಾಡೋಕೆ ಬಂದಿದ್ದೀಯಾ..? ಬೆದರಿಸೋಕೆ ಈ ಗ್ಯಾಂಗ್‌ ಶುರು ಮಾಡುತ್ತೆ.. ಮಹಿಳೆ ಹಾಗೂ ಆ ಇಬ್ಬರೂ ಸೇರಿಕೊಂಡು ಹಣ ಸುಲಿಗೆ ಮಾಡೋದಕ್ಕೆ ಶುರು ಮಾಡುತ್ತೆ.. ಹಣ ಕೊಡದಿದ್ದರೆ ರೇಪ್‌ ಕೇಸ್‌ ಹಾಕಿಸೋದಾಗಿ ಧಮ್ಕಿ ಹಾಕುತ್ತಾರೆ..
ವಾರದ ಹಿಂದೆ ಕೊರಿಯರ್‌ ಬಾಯ್‌ ಒಬ್ಬನಿಗೆ ಇದೇ ರೀತಿ ಹನಿಟ್ರ್ಯಾಪ್‌ ಮಾಡಲಾಗಿತ್ತು.. ಸಂತ್ರಸ್ತ ಯುವಕ ನೇರವಾಗಿ ಹೋಗಿ ಸಂಪಿಗೆಹಳ್ಳಿ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದ.. ಪೊಲೀಸರು ಪ್ಲ್ಯಾನ್‌ ಮಾಡಿ ಗ್ಯಾಂಗ್‌ ಅನ್ನು ಬಲೆಗೆ ಬೀಳಿಸಿದ್ದಾರೆ..

ಇದನ್ನೂ ಓದಿ; ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂದೆ ಬೈಕ್‌ಗೆ ಬೆಂಕಿ!

Share Post