CrimeDistricts

ಮುಳಬಾಗಿಲಿನಲ್ಲಿ ಶಿಕ್ಷಕಿಯ ಬರ್ಬರ ಹತ್ಯೆ!; ಕಾರಣ ಏನು..?

ಕೋಲಾರ; ಮುಳಬಾಗಿಲಿನಲ್ಲಿ ಸರ್ಕಾರಿ ಶಾಲೆ ಶಿಕ್ಷಕಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.. ಮೂವರು ಹಂತಕರು ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದ ಶಿಕ್ಷಕಿಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದೊಂದು ಸುಪಾರಿ ಕೊಲೆ ಎಂದು ಹೇಳಲಾಗುತ್ತಿದ್ದು, ಘಟನೆಯಿಂದಾಗಿ ಮಳಬಾಗಿಲು ಜನ ಬೆಚ್ಚಿಬಿದ್ದಾರೆ..

ಇದನ್ನೂ ಓದಿ; ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂದೆ ಬೈಕ್‌ಗೆ ಬೆಂಕಿ!

ಕಳೆದ ರಾತ್ರಿ ಈ ಕೃತ್ಯ ಎಸಗಲಾಗಿದೆ.. ಮುಳಬಾಗಿಲಿನ ಮುತ್ಯಾಲಪೇಟೆ ಲೇಔಟ್‌ನಲ್ಲಿ ವಾಸವಿರುವ ಶಿಕ್ಷಕಿ ದಿವ್ಯಶ್ರೀ ಕೊಲೆಯಾದ ಶಿಕ್ಷಕಿಯಾಗಿದ್ದಾರೆ.. 42 ವರ್ಷ ವಯಸ್ಸಿಸ ದಿವ್ಯಶ್ರೀ ಮುಡಿಯನೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.. ಕಳೆದ ರಾತ್ರಿ ದಿವ್ಯಶ್ರೀ ಅವರು ಮಗಳ ಜೊತೆ ಮನೆಯಲ್ಲಿದ್ದರು.. ಈ ವೇಳೆ ಮನೆಗೆ ನುಗ್ಗಿದ ಮೂವರು ಹಂತಕರು ಶಿಕ್ಷಕಿಯ ಕತ್ತು ಕುಯ್ದಿದ್ದಾರೆ.. ನಂತರ ಶಿಕ್ಷಕಿಯ ಮಗಳನ್ನೂ ಕೊಲೆ ಮಾಡಲು ಯತ್ನಿಸಿದ್ದು, ಆಕೆ ತಪ್ಪಿಸಿಕೊಂಡು ಬಚಾವಾಗಿದ್ದಾಳೆ.
ದಿವ್ಯಶ್ರೀ ಅಂತ ಪತಿ ಪದ್ಮನಾಭ್‌ ಉದ್ಯಮಿಯಾಗಿದ್ದಾರೆ.. ಈ ಕೊಲೆ ಯಾಕೆ ನಡೆಯಿತು..? ಯಾರು ಮಾಡಿಸಿದರು ಅನ್ನೋದು ಇನ್ನೂ ಗೊತ್ತಾಗಿಲ್ಲ.. ಪೊಲೀಸರ ತನಿಖೆ ಮುಂದುವರೆದಿದೆ..

ಇದನ್ನೂ ಓದಿ; ಅಕ್ರಮ ವರ್ಗಾವಣೆ; ಎರಡು ಬ್ಯಾಂಕ್‌ಗಳಲ್ಲಿನ ಎಲ್ಲಾ ಸರ್ಕಾರಿ ಖಾತೆ ಕ್ಲೋಸ್‌!

Share Post