CrimeDistricts

ಬೇಟೆಗೆ ಹೋಗಿದ್ದಾಗ ಮಿಸ್‌ಫೈರ್‌; ಯುವಕ ದಾರುಣ ಸಾವು!

ಚಿಕ್ಕಮಗಳೂರು; ಕಾಡು ಪ್ರಾಣಿಗಳನ್ನು ಬೇಟೆಯಾಡುವ ಕಾನೂನು ಪ್ರಕಾರ ಅಪರಾಧ.. ಇದಕ್ಕೆ ಕಠಿಣ ಶಿಕ್ಷೆ ಕೂಡಾ ವಿಧಿಸಲಾಗುತ್ತದೆ.. ಇದು ಗೊತ್ತಿದ್ದರೂ ಕೂಡಾ ಕಾಡುಪ್ರಾಣಿಗಳ ಬೇಟೆ ನಡೆಯುತ್ತಲೇ ಇದೆ.. ಅದರಲ್ಲೂ ಮಲೆನಾಡು ಹಾಗೂ ಕಾಡು ಹೆಚ್ಚಿರುವ ಭಾಗಗಳಲ್ಲಿ ಕಾಡು ಪ್ರಾಣಿಗಳ ಬೇಟೆ ಹೆಚ್ಚಾಗಿ ನಡೆಯುತ್ತದೆ.. ಅದೇ ರೀತಿ ಚಿಕ್ಕಮಗಳೂರಿನಲ್ಲಿ ಬೇಟೆಗೆ ತೆರಳಿದ್ದ ಯುವಕನೊಬ್ಬ ಮಿಸ್‌ ಫೈರ್‌ ಆಗಿ ತಾನೇ ಸತ್ತಿದ್ದಾನೆ..

ಚಿಕ್ಕಮಗಳೂರು ತಾಲ್ಲೂಕಿನ ಉಲುವಾಗಿಲು ಗ್ರಾಮದ ಬಳಿ ಕೆರೆಮಕ್ಕಿ ಗ್ರಾಮಮದ ಸಂಜು ಎಂಬಾತ ಕಾಡು ಪ್ರಾಣಿಗಳ ಬೇಟೆಗೆ ತೆರಳಿದ್ದ.. ಈ ವೇಳೆ ಆತ ಬಂದೂಕು ಮಿಸ್‌ ಫೈರ್‌ ಆಗಿದೆ.. ಇದರಿಂದ ಗುಂಡು ಸಂಜುಗೇ ತಗುಲಿದ್ದು ಆತ ಸಾವನ್ನಪ್ಪಿದ್ದಾನೆ..

ಮಲ್ಲಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ..

 

Share Post