CrimeNational

ತೀರ್ಥದಲ್ಲಿ ನಿದ್ರೆ ಮಾತ್ರೆ ಹಾಕಿ ಅರ್ಚಕನಿಂದ ಖಾಸಗಿ ಚಾನಲ್‌ ನಿರೂಪಕಿ ಮೇಲೆ ಅತ್ಯಾಚಾರ!

ಚೆನ್ನೈ; ಖಾಸಗಿ ಟಿವಿ ಚಾಲನ್‌ ನಿರೂಪಕಿಗೆ ತೀರ್ಥದಲ್ಲಿ ನಿದ್ದೆ ಮಾತ್ರೆ ಹಾಕಿಕೊಟ್ಟು ಅರ್ಚಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.. ತಮಿಳುನಾಡಿನ ರಾಜಧಾನಿ ಚೆನ್ನೈನ ಪ್ರಖ್ಯಾತ ಅಮ್ಮನ್‌ ದೇವಸ್ಥಾಗಳಲ್ಲಿ ಒಂದಾದ ಕಾಳಿಕಾಂಪಲ್‌ ದೇವಸ್ಥಾನ ಅರ್ಚಕನಿಂದ ಈ ಕೃತ್ಯ ನಡೆದಿದೆ.. ಅರ್ಚಕ ಕಾರ್ತೀಕ್‌ ಮುನಿಸ್ವಾಮಿ ವಿರುದ್ಧ ಖಾಸಗಿ ಚಾನಲ್‌ ನಿರೂಪಕಿಯೊಬ್ಬರು ವಿರುಗಂಬಾಕ್ಕಂ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಕೇಸ್‌ ದಾಖಲಿಸಿದ್ದಾರೆ..
ಸಾಲಿಗ್ರಾಮಂ ಮೂಲದ 30 ವರ್ಷದ ಟಿವಿ ಚಾನಲ್‌ ನಿರೂಪಕಿಯೇ ಸಂತ್ರಸ್ತೆ.. ನನಗೆ ಆಧ್ಯಾತ್ಮದ ಮೇಲೆ ಹೆಚ್ಚಿನ ಆಸಕ್ತಿ ಇದೆ.. ಹೀಗಾಗಿ ದೇವಸ್ಥಾನಗಳಿಗೆ ಹೆಚ್ಚು ಭೇಟಿ ನೀಡುತ್ತೇವೆ.. ಅದೇ ರೀತಿ ಚೆನ್ನೈನ ಪರ್ಯಾಸ್‌ ಪ್ರದೇಶದಲ್ಲಿರುವ ಪ್ರಸಿದ್ಧ ಕಾಳಿಕಾಂಪಲ್ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತೇವೆ.. ಹೀಗಾಗಿ ಅಲ್ಲಿನ ಅರ್ಚಕ ಕಾರ್ತೀಕ್‌ ಮುನಿಸ್ವಾಮಿ ನನಗೆ ಪರಿಚಯವಾಗಿದ್ದರು.. ಇದನ್ನೇ ಅವರು ದುರುಪಯೋಗ ಮಾಡಿಕೊಂಡು ತೀರ್ಥದಲ್ಲಿ ನಿದ್ದೆ ಮಾತ್ರ ಬೆರೆಸಿ ನನಗೆ ಕೊಟ್ಟಿದ್ದಾರೆ.. ನಾನು ನಿದ್ದೆ ಹೋಗಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಟಿವಿ ನಿರೂಪಕಿ ಆರೋಪ ಮಾಡಿದ್ದಾಳೆ..
ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರನಗಳು ಇದ್ದಾಗ ಅರ್ಚಕ ಟಿವಿ ನಿರೂಪಕಿಗೆ ವಾಟ್ಸ್‌ ಆಪ್‌ ಮೂಲಕ ಸಂದೇಶಗಳನ್ನು ಕಳುಹಿಸುತ್ತಿದ್ದರಂತೆ.. ಟಿವಿ ನಿರೂಪಕಿ ದೇವಸ್ಥಾನಕ್ಕೆ ಹೋದಾಗ ಆಕೆಯನ್ನು ಗರ್ಭಗುಡಿಯವರೆಗೂ ಕರೆದುಕೊಂಡು ಹೋಗಿ ದರ್ಶನ ಮಾಡಿಸುತ್ತಿದ್ದರಂತೆ.. ಹೀಗೆ ಸ್ನೇಹ ಬೆಳೆದಿದ್ದರಿಂದ ಆತ ದುರುಪಯೋಗ ಮಾಡಿಕೊಂಡು ನಿದ್ರೆ ಮಾತ್ರೆ ಬೆರೆಸಿಕೊಟ್ಟು ಅತ್ಯಾಚಾರ ಎಸಗಿದ್ದಾನೆ.. ಅನಂತರ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ. ಅನಂತರ ನಾನು ಗರ್ಭಿಣಿಯಾಗಿದ್ದು, ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದ. ಅನಂತರ ನನಗೆ ಸೆಕ್ಸ್‌ ವರ್ಕ್‌ ಮಾಡುವಂತೆ ಒತ್ತಾಯ ಮಾಡಿದ್ದಾನೆ ಎಂದು ನಿರೂಪಕಿ ಆರೋಪ ಮಾಡಿದ್ದಾಳೆ..

Share Post