DistrictsPolitics

ಹೊಸ ಪಕ್ಷ ಕಟ್ಟಲು ಜನಾರ್ದನರೆಡ್ಡಿ ತಯಾರಿ; ಗಣಿಧಣಿ ಲೆಕ್ಕಾಚಾರ ಏನು..?

ಗಂಗಾವತಿ; ಗಣಿಧಣಿ ಜನಾರ್ದನರೆಡ್ಡಿ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೊಪ್ಪಳದ ಗಂಗಾವತಿಯಲ್ಲಿದ್ದುಕೊಂಡು ಜನಾರ್ದನರೆಡ್ಡಿ ಪಕ್ಷ ಕಟ್ಟುತ್ತಾರಂತೆ. ಈಗಾಗಲೇ ಜನಾರ್ದನರೆಡ್ಡಿಯವರು ಕೊಪ್ಪಳದಲ್ಲಿ ಮನೆ ಮಾಡಿದ್ದು, ಹೊಸ ಪಕ್ಷ ಕಟ್ಟಲು ಸಿದ್ಧತೆ ನಡೆಸಿದ್ದಾರೆ. ರೆಡ್ಡಿ ಪಕ್ಷಕ್ಕೆ ಯಡಿಯೂರಪ್ಪ ಅವರು ಅಭಯ ಕೂಡಾ ಇದೆ ಎನ್ನಲಾಗುತ್ತಿದೆ.

ಕೊಪ್ಪಳ ಭಾಗದಲ್ಲಿ ಬಿಜೆಪಿಗೆ ಅಷ್ಟೊಂದು ಪ್ರಾಬಲ್ಯವಿಲ್ಲ. ಹೀಗಾಗಿ ಜನಾರ್ದರೆಡ್ಡಿ ಹೊಸ ಪಕ್ಷ ಕಟ್ಟಿದರೆ ಅವರಿಗೆ ಒಂದಷ್ಟು ಸ್ಥಾನ ಬಂದರೆ ಬಿಜೆಪಿ ಹಾಗೂ ಜನಾರ್ದನರೆಡ್ಡಿ ಪಕ್ಷ ಸೇರಿ ಸರ್ಕಾರ ರಚನೆ ಮಾಡಬಹುದು ಎಂಬ ಲೆಕ್ಕಾಚಾರ ಇದೆ ಎಂದು ಹೇಳಲಾಗುತ್ತಿದೆ. ಇನ್ನು ರಾಯಚೂರು ಜಿಲ್ಲೆ ಸಿಂದನೂರಿನಿಂದ ಜನಾರ್ದನರೆಡ್ಡಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸಿಂಧನೂರಿನಲ್ಲಿ ರೆಡ್ಡಿ ಸಮುದಾಯದವರು ಹೆಚ್ಚಿದ್ದಾರೆ. ಅವರೇ ಜನಾರ್ದನರೆಡ್ಡಿಯವರ ಟಾರ್ಗೆಟ್‌ ಎಂದು ತಿಳಿದುಬಂದಿದೆ.

Share Post