CrimeDistricts

ಮಂಗಳೂರಿನ ಅಧಿಕಾರಿ ಮಡಿಕೇರಿಯಲ್ಲಿ ನೇಣಿಗೆ ಶರಣು

ಮಡಿಕೇರಿ; ಮಂಗಳೂರಿನ ಅಧಿಕಾರಿಯೊಬ್ಬರು ಮಡಿಕೇರಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಲಾಡ್ಜ್‌ ಒಂದರಲ್ಲಿ ತಂಗಿದ್ದ ಶಿವಾನಂದ ಎಂಬ ಸರ್ಕಾರಿ ಅಧಿಕಾರಿ ಲಾಡ್ಜ್‌ ಕೊಠಡಿಯ ಫ್ಯಾನ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಆತ್ಮಹತ್ಯೆ ಮಾಡಿಕೊಂಡ ಶಿವಾನಂದ ಅವರು ಮಂಗಳೂರು ದಕ್ಷಿಣ ವಿಭಾಗದ ಬಿಇಒ ಕಚೇರಿ ಅಧಿಕಾರಿಯಾಗಿದ್ದು. ಶಿವನಾಂದ ಅವರು ಬಜ್ಪೆ ಮೂಲದವರಾಗಿದ್ದು, ಮಡಿಕೇರಿಗೆ ಏಕೆ ಬಂದರು ಅನ್ನೋದು ಇನ್ನೂ ಗೊತ್ತಾಗಿಲ್ಲ. ಮಡಿಕೇರಿ ನಗರ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

Share Post