BengaluruPolitics

ಬಿಜೆಪಿ ಜನೋತ್ಸವ ಭಾನುವಾರ ಅಲ್ಲ ಶನಿವಾರ; ಮತ್ತೆ ದಿನಾಂಕ ಬದಲು

ಬೆಂಗಳೂರು; ದೊಡ್ಡಬಳ್ಳಾಪುರದಲ್ಲಿ ಇಂದು ನಡೆಯಬೇಕಿದ್ದ ರಾಜ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶ ಉಮೇಶ್‌ ಕತ್ತಿ ಸಾವಿನ ಹಿನ್ನೆಲೆಯಲ್ಲಿ ಭಾನುವಾರಕ್ಕೆ ಮುಂದೂಡಲಾಗಿತ್ತು. ಆದ್ರೆ ಇದೀಗ ಆ ದಿನಾಂಕವನ್ನೂ ಬದಲಿಸಲಾಗಿದೆ. ಭಾನುವಾರದ ಬದಲಿಗೆ, ಶನಿವಾರವೇ ಜನೋತ್ಸವ ನಡೆಸಲು ತೀರ್ಮಾನಿಸಲಾಗಿದೆ. 

  ನಿನ್ನೆ ಮುಖ್ಯಮಂತ್ರಿ ಬೊಮ್ಮಾಯಿಯವರೇ ಭಾನುವಾರ ಜನೋತ್ಸವ ನಡೆಸೋದಾಗಿ ಪ್ರಕಟಿಸಿದ್ದರು. ಆದ್ರೆ ಇದ್ದಕ್ಕಿಂತೆ ಮತ್ತೆ ನಿರ್ಧಾರ ಬದಲಿಸಲಾಗಿದೆ. ಸಮಾವೇಶವನ್ನು ಭಾನುವಾರದ ಬದಲು ಶನಿವಾರವೇ ನಡೆಸುವ ತೀರ್ಮಾನ ಪ್ರಕಟಿಸಿದ್ದಾರೆ. ಈ ವಿಚಾರವನ್ನು ಅಧಿಕೃತ ರಾಜ್ಯ ಬಿಜೆಪಿ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಲಾಗಿದೆ.

ಈ ಹಿಂದೆ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಹಿನ್ನೆಲೆಯಲ್ಲಿ ದೊಡ್ಡ ಬಳ್ಳಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವವನ್ನು ಮುಂದೂಡಲಾಗಿತ್ತು. ಇದೀಗ ಮೂರನೇ ಬಾರಿ ದಿನಾಂಕ ಬದಲಿಸಲಾಗಿದೆ.

Share Post