CrimeNational

ಕರೆಂಟ್‌ ಕಂಬ ಏರಿದ ಮಹಿಂದ್ರ ಥಾರ್‌..!; ಕಾರಣ ಏನು ಗೊತ್ತಾ..?

ಮಹಿಂದ್ರ ಥಾರ್‌ ವಾಹನವೊಂದು ವಿದ್ಯುತ್‌ ಕಂಬ ಏರಿರುವ ಘಟನೆ ನಡೆದಿದೆ.. ಅತಿವೇಗದಿಂದ ವಾಹನ ಚಲಾಯಿಸಿದ್ದೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.. ಹರಿಯಾಣದ ಗುರುಗ್ರಾಮ್ ನಗರದ ಸೈಬರ್ ಸಿಟಿಯಲ್ಲಿ ಈ ಘಟನೆ ನಡೆದಿದೆ..

ಅತಿವೇಗ ವೇಗವಾಗಿ ಬಂದ ಅಮೇಜ್‌ ಕಾರೊಂದು ಥಾರ್‌ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಅದು ವಿದ್ಯುತ್‌ ಕಂಬಕ್ಕೆ ಗುದ್ದಿ ಅದರ ಮೇಲೇರಿದೆ.. ಥಾರ್‌ ಕಾರನ್ನು ಯುವತಿ ಓಡಿಸುತ್ತಿದ್ದಳು ಎಂದು ತಿಳಿದುಬಂದಿದೆ.. ಆಕೆಯನ್ನು ಸ್ಥಳೀಯರು ಕಾರಿನಿಂದ ಇಳಿಸಿದ್ದಾರೆ. ಥಾರ್‌ ಕಾರು ವಿದ್ಯುತ್‌ ಕಂಬಕ್ಕೆ ಒರಗಿಕೊಂಡು ನಿಂತಿದೆ.

ಘಟನೆಯಿಂದ ಸದ್ಯಕ್ಕೆ ಯಾವುದೇ ಅನಾಹುತ ಸಂಭವಿಸಿಲ್ಲ.. ಯುವತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ..

 

Share Post