CrimeNational

ತಂದೆ ನೋಡಲು ಹೋಗಿದ್ದ ಮದನಿಗೆ ಅರ್ಧ ದಾರಿಯಲ್ಲೇ ಅನಾರೋಗ್ಯ.!

ಬೆಂಗಳೂರು; ತಂದೆ ಅನಾರೋಗ್ಯಕ್ಕೀಡಾಗಿರುವುದರಿಂದ ಅವರನ್ನು ನೋಡಲು ಕೋರ್ಟ್‌ ಅನುಮತಿ ಪಡೆದಿದ್ದ ಬೆಂಗಳೂರು ಸರಣಿ ಸ್ಫೋಟದ ಆರೋಪಿ ಹಾಗೂ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ ಅಧ್ಯಕ್ಷ ಅಬ್ದುಲ್‌ ನಾಸಿರ್‌ ಮದನಿಯೇ ತೀವ್ರ ಅನಾರೋಗ್ಯಕ್ಕೀಡಾಗಿದ್ದಾನೆ. ತಂದೆಯನ್ನು ನೋಡದೆಯೇ ಆತ ವಾಪಸ್‌ ಬಂದಿದ್ದಾನೆ. 

ಕೇರಳದಲ್ಲಿರುವ ಮದನಿ ತಂದೆ ಅನಾರೋಗ್ಯಕ್ಕೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಿಂದ ಪೆರೋಲ್‌ ಪಡೆದಿದ್ದ ಮದನಿ ಜೂನ್‌ 26ರಂದು ಕೇರಳಕ್ಕೆ ತೆರಳಿದ್ದ. ಆದ್ರೆ ತಂದೆ ಇರುವ ಊರಿಗೆ ತೆರಳುವ ಮುನ್ನವೇ ಮದನಿಗೆ ಬಿಪಿ ಹೆಚ್ಚಾಗಿ ಅಸ್ವಸ್ಥನಾಗಿದ್ದ. ಈ ಹಿನ್ನೆಲೆಯಲ್ಲಿ ಕೇರಳದಲ್ಲೇ ಮದನಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಆತ 12 ದಿನ ಮಾತ್ರ ಪೆರೋಲ್‌ ಪಡೆದಿದ್ದ. ಅದು ಇಂದನಿಗೆ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ತಂದೆಯನ್ನು ನೋಡದೆಯೇ ಮದನಿಯನ್ನು ವಾಪಸ್‌ ಬೆಂಗಳೂರು ಜೈಲಿಗೆ ಕರೆತರಲಾಗಿದೆ.

ಮದನಿ ಜೊತೆ 12 ದಿನ ಕೇರಳದಲ್ಲಿರಲು ಸಿಬ್ಬಂದಿ ಖರ್ಚು ಹಾಗೂ ಸರ್ವೀಸ್ ಶುಲ್ಕಕ್ಕಾಗಿ 6 ಲಕ್ಷ 76 ಸಾವಿರ 101 ರೂಪಾಯಿ ಹಣವನ್ನು ಪಾವತಿ ಮಾಡಿದ್ದ.

 

Share Post