CrimeNational

ವಿವಾಹಿತ ಮಹಿಳೆ ಜೊತೆ ಪ್ರೀತಿ; ಮಹಿಳೆ ಸಹೋದರನಿಂದ ಪ್ರೇಮಿ ಮರ್ಡರ್‌!

ಮುಂಬೈ; ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಆಕೆಯ ಸಹೋದರ ಕೊಲೆ ಮಾಡಿರುವ ಘಟನೆ ನಡೆದಿದೆ.. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.. ಮಹಾರಾಷ್ಟ್ರದ ಥಾಣೆಯ ಭಿವಂಡಿ ಎಂಬಲ್ಲಿ ಈ ಕೃತ್ಯ ಎಸಗಲಾಗಿದೆ.. ಕೊಲೆ ಮಾಡಿದ ಮೇಲೆ ಮೃತದೇಹವನ್ನು ಕ್ವಾರಿಯಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು.. ಇನ್ನೂ ಮೂವರು ಆರೋಪಿಗಳು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

ಮುಂಬೈ ಮೂಲದ ಕಂಪನಿಯಲ್ಲಿ ಕೆಲಸ ಮಾಡುವ ಆನಂದ್ ಗುಪ್ತಾ (25) ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದಾರೆ.. ಸುಜಿತ್ ಗಾಯಕ್ವಾಡ್ (25) ಹಾಗೂ ಆತನ ಇತರ ಮೂವರು ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.. ಸುಜಿತ್ ಗಾಯಕ್ವಾಡ್ (25) ಅಕ್ಕನಿಗೆ ಈಗಾಗಲೇ ಮದುವೆಯಾಗಿದೆ.. ಆ ಮಹಿಳೆಯನ್ನು ಆನಂದ್‌ ಗುಪ್ತಾ ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ.. ಇದರಿಂದ ಕೋಪಗೊಂಡಿದ್ದ ಸುಜಿತ್‌, ಕೊಲೆಯಾದ ಆನಂದ್‌ ಗುಪ್ತಾನನ್ನು ಭಿವಂಡಿಯ ಲೋಧಾ ಧಾಮ್‌ ಬಳಿಗೆ ಫೋನ್‌ ಮಾಡಿ ಕರೆಸಿಕೊಂಡಿದ್ದ..

ಈ ವೇಳೆ ಇಬ್ಬರ ನಡುವೆ ಜೋರು ಜಗಳ ನಡೆದಿದೆ.. ಇದೇ ವೇಳೆ ಆನಂದ್‌ ಗುಪ್ತಾನನ್ನು ಕೊಲೆ ಮಾಡಲಾಗಿದ್ದು, ನಂತರ ನಾಲ್ವರು ಆರೋಪಿಗಳೂ ಸೇರಿ ಮೃತದೇಹವನ್ನು ತೆಗೆದುಕೊಂಡು ಹೋಗಿ ಕಲ್ಲು ಕ್ವಾರಿಯಲ್ಲಿ ಎಸೆದು ಹೋಗಿದ್ದರು.. ಸದ್ಯ ಪ್ರಕರಣದ ಮುಖ್ಯ ಆರೋಪಿಯನ್ನು ಬಂಧಿಸಲಾಗಿದೆ..  ನಾರ್ಪೋಲಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ತನಿಖೆ ನಡೆಯುತ್ತಿದೆ,..

 

Share Post