Crime

ಪ್ರಾಣಕ್ಕೆ ಕುತ್ತು ತಂದ ಮೌಢ್ಯತೆ:ಮಹಿಳೆ ಸಾವು

ಹಾಸನ: ತಲೆನೋವು ವಾಸಿ ಮಾಡುವುದಾಗಿ ನಂಬಿಸಿದ ಪೂಜಾರಿ ಮಹಿಳೆಯ ಪ್ರಾಣವನ್ನೇ ತೆಗೆದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾ. ಗೌಡಗೆರೆ ಗ್ರಾಮದಲ್ಲಿ ನಡೆದಿದೆ.  ಈಕೆಯ ಹೆಸರು ಪಾರ್ವತಿ(47) ಬಹಳ ವರ್ಷಗಳಿಂದ ತಲೆನೋವಿನಿಂದ ಬಳಲುತ್ತಿದ್ರು.  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರೂ ತಲೆ ನೋವು ವಾಸಿಯಾಗಲಿಲ್ಲ. ಯಾರೋ ಪರಿಚಯಸ್ಥರು ಬೆಕ್ಕ ಗ್ರಾಮದ ಪಿರಿಯಾಪಟ್ಟಣದಮ್ಮ ದೇವರ ಪೂಜಾರಿ ಹತ್ತಿರ ಹೋದ್ರೆ ತಲೆ ನೋವು ವಾಸಿಯಾಗುತ್ತೆ ಅಂದಿದ್ದಾರೆ. ಅವರ ಮಾತು ನಂಬಿದ ಪಾರ್ವತಿ ದೇವಸ್ಥಾನಕ್ಕೆ ಹೋಗಿ ಪೂಜಾರಿ ಬಳಿ ಇರುವ ವಿಚಾರ ಹೇಳಿದ್ದಾರೆ.  ಈ ವೇಳೆ ಪೂಜಾರಿ  ದೇವರ ಸನ್ನಿಧಿಯಲ್ಲಿ ಪಾರ್ವತಿ ಅವರ ತಲೆಗೆ ಬೆತ್ತದಲ್ಲಿ ಬಲವಾಗಿ ಹೊಡೆದಿದ್ದಾನೆ. ಬಳಿಕ ನಿಂಬೆ ರಸ ಕುಡಿಸಿ ನಿಮ್ಮ ತಲೆ ನೋವು ವಾಸಿಯಾಗಿದೆ ಎಂದು ಹೇಳಿ ಕಳುಹಿಸಿದ್ದಾನೆ.
ಸಣ್ಣ ಪ್ರಮಾಣದಲ್ಲಿ ಬರುತ್ತಿದ್ದ ತಲೆ ನೋವು ತೀವ್ರವಾಗಿದೆ. ತೀವ್ರ ಅಸ್ವಸ್ಥಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದ್ರೆ ತಲೆಗೆ ಬೆತ್ತದಿಂದ ಜೋರಾದ ಪೆಟ್ಟು ಬಿದ್ದ ಕಾರಣ ಪಾರ್ವತಿ ಸಾವನ್ನಪ್ಪಿದ್ದಾರೆ. ಯಾವುದೋ ಶಕ್ತಿ ತನ್ನ ನೋವನ್ನು ವಾಸಿ ಮಾಡುತ್ತೆ ಎಂದು ನಂಬಿ ತನ್ನ ಪ್ರಾಣವನ್ನೇ ಬಲಿಕೊಟ್ಟ ದುರಂತ ಇದು.

Share Post