CrimeDistricts

ಪ್ರೇಮಿಯೊಂದಿಗೆ ಸರಸವಾಡಲು ಪತಿ ಅಡ್ಡಿ; ನಿದ್ರೆ ಮಾತ್ರೆ ಕೊಟ್ಟ ಕೊಲೆ

ಚಿಕ್ಕಮಗಳೂರು; ಪ್ರಿಯಕರನೊಂದಿಗೆ ಸರಸವಾಡಲು ಪತಿ ಅಡ್ಡವಾಗುತ್ತಿದ್ದಾನೆ ಅನ್ನೋ ಕಾರಣಕ್ಕೆ ಪತ್ನಿಯೇ ಪತಿಗೆ ಊಟದಲ್ಲಿ ನಿದ್ದೆ ಮಾತ್ರೆ ಸೇರಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಚಿಕ್ಕಮಗಹಳೂರು ಜಿಲ್ಲೆ ಕಡೂರು ಬಳಿ ಈ ಕೃತ್ಯ ಎಸಗಲಾಗಿದೆ.

28 ವರ್ಷದ ನವೀನ್‌ ಎಂಬಾತನೇ ಕೊಲೆಯಾದ ದುರ್ದೈವಿ. ಆರೋಪಿ ಪತ್ನಿ ಪಾವನಾಳನ್ನು ಬಂಧಿಸಲಾಗಿದೆ. ನವೀನ್‌ ಅವರನ್ನು ಕೊಲೆ ಮಾಡಲಾಗಿದ್ದು, ಯಗಟಿ ಕೆರೆಗೆ ಎಸೆಯಲಾಗಿತ್ತು. ಆಗಸ್ಟ್‌ ಆರರಂದು ಕೆರೆಯಲ್ಲಿ ನವೀನ್‌ ಮೃತದೇಹ ಪತ್ತೆಯಾಗಿತ್ತು.

ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಪತ್ನಿಯೇ ಹಂತಕಿ ಅನ್ನೋದು ಸಾಬೀತಾಗಿದೆ. ವಿಚಾರಣೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ಸಾಯಿಸಿ, ನಂತರ ಪ್ರಿಯಕರನ ಜೊತೆ ಬೈಕ್‌ನಲ್ಲಿ ಮೃತದೇಹವನ್ನು ತಂದು ಕೆರೆಗೆ ಹಾಕಿದ್ದೆವು ಎಂದು ಆಕೆ ಹೇಳಿದ್ದಾರೆ. ಮತ್ತೊಬ್ಬ ಆರೋಪಿ ಸಂಜಯ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share Post