CrimeDistricts

ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ

ಚಿಕ್ಕಮಗಳೂರು; ಮನಸ್ತಾಪದ ಹಿನ್ನೆಲೆಯಲ್ಲಿ ತವರು ಮನೆ ಸೇರಿದ್ದ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಕರಕುಚ್ಚಿ ಗ್ರಾಮದಲ್ಲಿ ಈ ಕೃತ್ಯ ಎಸಗಲಾಗಿದೆ..

ಇದನ್ನೂ ಓದಿ; ದೇವೇಗೌಡರನ್ನು ಭೇಟಿಯಾದ ಮಾಜಿ ಸಚಿವ ರೇವಣ್ಣ; ಗೌಡರ ನಿವಾಸದ ಬಳಿ ಹೇಳಿದ್ದೇನು..?

ಚರಣ್‌ ಹಾಗೂ ಮೇಘಾ ಇಬ್ಬರೂ ಪ್ರೀತಿಸುತ್ತಿದ್ದರು.. ಎರಡೂ ಮನೆಯವರ ಒಪ್ಪಿಗೆಯೊಂದಿಗೆ ಎರಡು ವರ್ಷದ ಹಿಂದೆ ಮದುವೆಯೂ ಆಗಿದ್ದರು.. ಆದ್ರೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.. ಹೀಗಾಗಿ ಮೇಘಾ ಗಂಡನನ್ನು ತೊರೆದುಬಂದು ತಾಯಿಯ ಜೊತೆ ವಾಸವಿದ್ದಳು. ಇದರಿಂದಾಗಿ ಪತಿ ಚರಣ್‌ ಆಕ್ರೋಶ ಗೊಂಡಿದ್ದ..

ಇದನ್ನೂ ಓದಿ; ಪ್ರಿಯತಮೆಯ ತಾಯಿಯನ್ನು ಗುಂಡಿಕ್ಕಿ ಕೊಂದ 17 ವರ್ಷದ ಬಾಲಕ!

ಮೇಘಾ ಬಟ್ಟೆ ತೊಳೆಯರು ಕೆರೆಯ ಬಳಿಗೆ ಹೋಗಿದ್ದಳು.. ಇದನ್ನೇ ಕಾಯುತ್ತಿದ್ದ ಆರೋಪಿ ಚರಣ್‌, ಪತ್ನಿಯ ಮೇಲೆ ದಾಳಿ ಮಾಡಿದ್ದಾನೆ.. ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.. ಕೊಲೆ ಮಾಡಿದ ನಂತರ ಆರೋಪಿ ಪರಾರಿಯಾಗಿದ್ದಾನೆ.. ಲಕ್ಕವಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

 

Share Post