CrimeNational

ದೇವರಿಗೆ ನಮಸ್ಕಾರ ಮಾಡಿ, ಮನೆಯ ಮೇಲೆ ಬಾಂಬ್‌ ದಾಳಿ!

ಭೋಪಾಲ್; ವ್ಯಕ್ತಿಯೊಬ್ಬ ದೇವರಿಗೆ ನಮಸ್ಕಾರ ಮಾಡಿ ಅನಂತರ ಮನೆಯೊಂದರ ಬಾಂಬ್‌ ದಾಳಿ ನಡೆಸಿದ್ದಾನೆ.. ಭೋಪಾಲ್‌ನ ಜಬಲ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.. ಭಾರತ್​​ ಕೃಷಿ ಸಮಾಜ ಶಾಲೆಯ ಬಳಿಯ ಮನೆಯೊಂದರ ಮೇಲೆ ಈ ದಾಳಿ ನಡೆದಿದೆ..

ಆರೋಪಿ ದೇವಸ್ಥಾನದ ಬಳಿ ನಮಸ್ಕಾರ ಮಾಡುತ್ತಿರುವುದು ಹಾಗೂ ಮನೆಯ ಮೇಲೆ ಬಾಂಬ್‌ ದಾಳಿ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.. ಆರೋಪಿಯನ್ನು ಆನಂದ್‌ ಠಾಕೂರ್‌ ಎಂದು ಗುರುತಿಸಲಾಗಿದೆ..

ಆರೋಪಿ ಆನಂದ್‌ ಠಾಕೂರ್‌ ಕೆಲವರು ಹಣ ನೀಡಬೇಕಾಗಿತ್ತು.. ಆದ್ರೆ ಕೆಲವರು ಹಣ ನೀಡಲು ಹಿಂದೇಟು ಹಾಕಿದ್ದಾರೆ.. ಇದರಿಂದಾಗಿ ಕೆರಳಿದ ಆರೋಪಿ ಆನಂದ್‌ ಠಾಕೂರ್‌ ಜನರನ್ನು ಬೆದರಿಸಲು ಈ ಕೆಲಸ ಮಾಡಿದ್ದಾರೆ.. ಮೊದಲು ಒಂದು ಮನೆ ಮೇಲೆ ಬಾಂಬ್‌ ಎಸೆಯಲಾಗಿದ್ದು, ಅದು ಸ್ಫೋಟಗೊಂಡಿಲ್ಲ.. ಅನಂತರ ಇನ್ನೊಂದು ಎಸೆದಿದ್ದಾನೆ.. ಅದು ಸ್ಫೋಟಗೊಂಡು ಹೊಗೆ ಬಂದಿದೆ..

ಬಾಂಬ್‌ ಬ್ಲಾಸ್ಟ್‌ ಆಗುತ್ತಿದ್ದಂತೆ ಆರೋಪಿ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.. ಈ ಸಂಬಂದ ಘಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

 

Share Post