Bengaluru

ಬೆಂಗಳೂರಿನಲ್ಲಿ ಭಾರಿ ಮಳೆ; ಟ್ರಾಫಿಕ್‌ನಲ್ಲಿ ಸಿಕ್ಕಿ ಪರದಾಡಿದ ವಾಹನ ಸವಾರರು!

ಬೆಂಗಳೂರು; ಸಂಜೆ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ.. ಇದರಿಂದಾಗಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದವರು ಮಳೆಯಲ್ಲಿ ಸಿಲುಕಿ ಒದ್ದಾಡಿದ ಘಟನೆ ನಡೆದಿದೆ.. ಭಾರಿ ಗಾಳಿ ಸಹಿತ ಮಳೆಯಾಗಿದ್ದರಿಂದಾಗಿ ಅಲ್ಲಲ್ಲಿ ತೊಂದರೆಗಳಾಗಿವೆ., ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.. ರಸ್ತೆಗಳಿಗೆ ನೀರು ಹರಿದಿದ್ದರಿಂದ ವಾಹನ ಸಂಚಾರಕ್ಕೆ ಕಷ್ಟವಾಗಿದೆ.. ಕೆಲವೆಡೆ ಮರಗಳು ಉರುಳಿಬಿದ್ದು ಅವಾಂತರ ಸೃಷ್ಟಿಯಾಗಿದೆ..

ಕೆ.ಆರ್ ಸರ್ಕಲ್, ಜೆ.ಸಿ ರಸ್ತೆ, ಮೈಸೂರ್ ಬ್ಯಾಂಕ್ ಸರ್ಕಲ್, ಕೆ.ಆರ್.ಮಾರ್ಕೆಟ್, ವಿಜಯನಗರ, ಯಲಹಂಕ, ಮೆಜೆಸ್ಟಿಕ್, ಚಿಕ್ಕಪೇಟೆ, ರಾಜಾಜಿನಗರ, ನಾಯಂಡನಹಳ್ಳಿ, ನೆಲಮಂಗಲ, ಪುಲಿಕೇಶಿ ನಗರ, ಹುಳಿಮಾವು, ವಸಂತನಗರ ಮುಂತಾದ ಕಡೆ ಭರ್ಜರಿ ಮಳೆಯಾಗಿದೆ.. ಮೆಜೆಸ್ಟಿಕ್‌ ಸುತ್ತಮುತ್ತ ವಿಪರೀತ ಟ್ರಾಫಿಕ್‌ ಜಾಮ್‌ ಆಗಿ ಜನ ಪರದಾಡಿದ್ದಾರೆ..

ಮೇ 13 ಹಾಗೂ 14ರಂದು ಕೂಡಾ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ತಿಳಿದುಬಂದಿದೆ..

Share Post