BengaluruHealth

ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನಿಧನ!

ಮಂಗಳೂರು; ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬೆಳ್ತಂಗಡಿ ಮಾಡಜಿ ಶಾಸಕ ವಸಂತ ಬಂಗೇರ ಅವರು ನಿಧನರಾಗಿದ್ದಾರೆ.. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.. ಐದು ಬಾರಿ ಶಾಸಕರಾಗಿ, ನಿಗಮ-ಮಂಡಳಿ ಅಧ್ಯಕ್ಷರಾಗಿ ಬಂಗೇರ ಅವರು ಕೆಲಸ ಮಾಡಿದ್ದಾರೆ..

ವಸಂತ ಬಂಗೇರ ಅವರು ನೇರ, ನಿಷ್ಠರ ರಾಜಕಾರಣಿಯಾಗಿದ್ದರು.. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.. ಮೂರು ಬಾರಿ ಪರಾಭವಗೊಂಡಿದ್ದರು..  ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವಸಂತ ಬಂಗೇರ ಅವರು ಇಂದು ಸಂಜೆ 4 ಗಂಟೆ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

1946ರ ಜನವರಿ 15ರಂದು ವಸಂತ ಬಂಗೇರ ಬೆಳ್ತಂಗಡಿಯಲ್ಲಿ ಜನಿಸಿದ್ದರು. ವಂಸತ ಬಂಗೇರಾ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು.. ನಾಳೆ ಸ್ವಗ್ರಾಮದಲ್ಲಿ ವಸಂತ ಬಂಗೇರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ..

 

Share Post