BengaluruCrime

ಅತ್ತೆಯನ್ನು ಬರ್ಬರ ಕೊಲೆ ಮಾಡಿ ಅಳಿಯ ಪರಾರಿ

ಬೆಂಗಳೂರು; ಸ್ವಂತ ಅತ್ತೆಯ ಕುತ್ತಿಗೆ ಕುಯ್ದು ಕೊಲೆ ಮಾಡಿರುವ ಅಳಿಯ ಅಲ್ಲಿಂದ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆಂಗೇರಿಯಲ್ಲಿ ಈ ಕೃತ್ಯ ಎಸಗಲಾಗಿದ್ದು, ಏಳಲ್‌ ಅರಸಿ ಎಂಬಾಕೆಯೇ ಕೊಲೆಯಾದ ಮಹಿಳೆ. ಆರೋಪಿ ಅಳಿಯ ದಿವಾಕರ್‌ ನಾಪತ್ತೆಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ದಿವಾಕರ್‌ ಪತ್ನಿ ತಮ್ಮ ಮಗುವಿನೊಂದಿಗೆ ಕೆಜಿಎಫ್‌ನಲ್ಲಿರುವ ತವರು ಮನೆಗೆ ಹೋಗಿದ್ದಳು. ಇದ್ರಿಂದಾಗಿ ಅತ್ತೆ ಮನೆಗೆ ಹೋಗಿದ್ದ ಆರೋಪಿ ದಿವಾಕರ್‌ ಪತ್ನಿ ಹಾಗೂ ಅತ್ತೆಗೆ ಹೇಳದೇ ಮಗುವನ್ನು ಬೆಂಗಳೂರಿಗೆ ಕರೆತಂದಿದ್ದ. ಕೆಂಗೇರಿಯಲ್ಲಿರುವ ತನ್ನ ತಂಗಿ ಮನೆಗೆ ಮಗುವನ್ನು ಕರೆತಂದಿದ್ದ. ಹೀಗಾಗಿ ಮಗುವನ್ನು ವಾಪಸ್‌ ಕರೆದುಕೊಂಡು ಹೋಗವುದಕ್ಕೆ ಅತ್ತೆ ಏಳಲ್‌ ಅರಸಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ದಿವಾಕರ್‌ ಹಾಗೂ ಏಳಲ್‌ ಅರಸಿ ನಡುವೆ ಗಲಾಟೆಯಾಗಿದೆ. ಇದ್ರಿಂದ ಉದ್ರಿಕ್ತಗೊಂಡ ದಿವಾಕರ್‌ ಮನೆಯಲ್ಲಿದ್ದ ಚಾಕುವಿನಿಂದ ಅತ್ತೆ ಏಳಲ್‌ ಅರಸಿ ಕುತ್ತಿಗೆ ಇರಿದು ಕೊಲೆ ಮಾಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.

Share Post