Crime

ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಲು ಹೋಗಿ ನಾಲ್ವರು ದುರ್ಮರಣ

ಸೋಲಾಪುರ: ಮಹಾರಾಷ್ಟ್ರ ಸೋಲಾಪುರದಲ್ಲಿ ಮ್ಯಾನ್‌ ಹೋನ್‌ ಸ್ವಚ್ಛಗೊಳಿಸುತ್ತಿದ್ದ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮ್ಯಾನ್‌ಹೋಲ್‌ನಲ್ಲಿ ಆಕ್ಸಿಜನ್‌ ಇರದ ಕಾರಣ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮ್ಯಾನ್‌ಹೋಲ್‌ನಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಲು ಕಾರ್ಮಿಕನೊಬ್ಬ ಇಳಿದಿದ್ದ. ಆದರೆ ಎಷ್ಟು ಹೊತ್ತಾದರೂ ಆತ ಆಚೆ ಬಂದಿಲ್ಲ. ಕೂಗಿದರೂ ಆತ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಕಾರ್ಮಿಕನನ್ನು ಹುಡುಕಲು ಮತ್ತೊಬ್ಬ ಮ್ಯಾನ್‌ಹೋಲ್‌ಗೆ ಇಳಿದಿದ್ದು, ಆತ ಕೂಡಾ ಹೊರಬಂದಿಲ್ಲ. ಹೀಗೆ ಒಬ್ಬರಿಂದೊಬ್ಬರು ಮ್ಯಾನ್‌ ಹೋಲ್‌ಗೆ ಇಳಿದು ನಾಲ್ವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

Share Post