CrimeNational

ಕಾರಿಗೆ ಬಸ್‌ ಡಿಕ್ಕಿ; ಛತ್ತಿಸ್‌ಗಢದಲ್ಲಿ ಐವರ ದುರ್ಮರಣ

ರಾಯ್ಪುರ:  ಛತ್ತಿಸ್‌ಗಢದ ಜಗದಲ್‌ಪುರ ಎನ್‌ಎಚ್‌ 30ರಲ್ಲಿ ಮಟವಾಡ ಸೇತುವೆ ಬಳಿ ಇಂದು ಮುಂಜಾನೆ ಖಾಸಗಿ ಬಸ್​ ಹಾಗೂ ಟಾಟಾ ನೆಕ್ಸಾನ್​ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಯುವಕನೊಬ್ಬ  ತೀವ್ರವಾಗಿ ಗಾಯಗೊಂಡಿದ್ದ. ಆತನ್ನು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ರಾಯ್​ಪುರದಿಂದ ಬರುತ್ತಿದ್ದ ಟಾಟಾ ನೆಕ್ಸಾನ್​ ಕಾರಿಗೆ ಬಸ್​ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಇದರಲ್ಲಿ ಐವರು ಯುವಕರು ಪ್ರಯಾಣಿಸುತ್ತಿದ್ದು, ಐವರೂ ಸಾವನ್ನಪ್ಪಿದ್ದಾರೆ.  ಮೃತದೇಹಗಳನ್ನು ಹೊರತೆಗೆಯಲು ಗ್ಯಾಸ್ ಕಟ್ಟರ್‌ಗಳನ್ನು ಬಳಸಲಾಗಿತ್ತು. 4 ಯುವಕರು ಜಗದಲ್‌ಪುರದ ವಿವಿಧ ಸ್ಥಳಗಳಿಂದ ಬಂದಿದ್ದರು. ಒಬ್ಬ ಯುವಕ ಸುಕ್ಮಾ ಜಿಲ್ಲೆಯವನು ಎಂದು ಹೇಳಲಾಗುತ್ತಿದೆ.

Share Post