CrimeNational

ಆಟೋ-ಟ್ರಕ್‌ ನಡುವೆ ಭೀಕರ ಅಪಘಾತ-ನಾಲ್ವರು ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

ತೆಲಂಗಾಣ: ರಸ್ತೆ ಅಪಘಾತಗಳು ಸರ್ವೆ ಸಾಮಾನ್ಯವಾಗಿವೆ. ದಿನಂಪ್ರತಿ ಒಂದಲ್ಲಾ ಒಂದು ರಸ್ತೆ ಅಪಘಾತ ನಡೆಯುತ್ತಲೇ ಇರುತ್ತದೆ. ಮಧ್ಯರಾತ್ರಿ ಕೂಡ ಟ್ರಕ್‌ ಹಾಗೂ ಆಟೋ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಲುಗು ಜಿಲ್ಲೆಯ ಎರ್ರಿ ಗಟ್ಟಮ್ಮ ಎಂಬಲ್ಲಿ ನಡೆದಿದೆ.  ಮಂಗಪೇಟ ಮಂಡಲದ ಕೋಮಟಿಪಲ್ಲಿಯಿಂದ ಎಂಟು ಮಂದಿ ಆಟೋದಲ್ಲಿ ಶರೀಫ್ ದರ್ಗಾಕ್ಕೆ ಬಂದು ಹೋಗುತ್ತಿದ್ದರು. ಅತ್ತೂರು ನಗರದಿಂದ ಎದುರಿಗೆ ಡಿಸಿಎಂ ಟ್ರಕ್‌ ಕೂಡಾ ಬರುತ್ತಿತ್ತು.  ಈ ವ್ಯಾನ್ ನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಹರಿದಾಡ್ತಿದೆ. ಎರ್ರಿ ಗಟ್ಟಮ್ಮ ಎಂಬಲ್ಲಿ ಆಟೋ, ಡಿಸಿಎಂ ವ್ಯಾನ್‌  ಮುಖಾಮುಖಿ ಡಿಕ್ಕಿಯಾಗಿದೆ.

ದುರಂತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಗಾಯಗೊಂಡ ನಾಲ್ವರನ್ನು ಮುಲುಗು ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಎಂಜಿಎಂ ಆಸ್ಪತ್ರೆಗೆ ಸಾಗಿಸಲಾಯಿತು. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತರನ್ನು ಅಜಯ್, ಕಿರಣ್, ಕೌಸಲ್ಯ ಮತ್ತು ಆಟೋ ಚಾಲಕ ಜಾನಿ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಪಲ್ಲೆ ಭೋಜನ ಪದ್ಮ, ರಸೂಲ್, ವೆನ್ನೆಲ, ವಸಂತ ಎಂದು ತಿಲೀದುಬಂದಿದೆ.  ಟ್ರಕ್‌ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share Post