CrimeDistricts

ಗ್ಯಾರೇಜ್‌ ಉದ್ಯೋಗಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ; ಕಾರಣ ನಿಗೂಢ!

ಹಾವೇರಿ; ಆತ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಹುಡುಗ.. ಆತನ ಮೇಲೆ ಅದೇನು ದ್ವೇಷ ಇತ್ತೋ ಏನೋ ದುಷ್ಕರ್ಮಿಗಳ ಗುಂಪು ಆತನ ಮೇಲೆ ಏಕಾಏಕಿ ದಾಳಿ ಮಾಡಿದೆ.. ಮಾರಕಾಸ್ತ್ರಗಳಿಂದ ಮಾರಣಾಂತಿಕ ದಾಳಿ ನಡೆಸಿ ಪರಾರಿಯಾಗಿದೆ.. ಇದೀಗ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ..

ಈ ಘಟನೆ ನಡೆದಿರೋದು ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಗೋಕಾಕ್‌ ಸರ್ಕಲ್‌ನಲ್ಲಿ.. ಆಬಿದ್‌ ಅಲ್ಲಾಭಕ್ಷ್‌ ಚೌದ್ರಿ ಎಂಬ 30 ವರ್ಷದ ವ್ಯಕ್ತಿಯೇ ತೀವ್ರ ಹಲ್ಲೆಗೊಳಗಾದಾತ.. ಈತ ಸವಣೂರಿನಲ್ಲಿ ಗ್ಯಾರೇಜ್‌ ಕೆಲಸ ಮಾಡುತ್ತಾನೆ.. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು, ಒಂದು ಒಂದು ಮಾತೂ ಆಡದೇ ನೇರವಾಗಿ ಮಾರಕಾಸ್ತ್ರಗಳನ್ನು ತೆಗೆದು ತೀವ್ರ ದಾಳಿ ಮಾಡಿ ಪರಾರಿಯಾಗಿದ್ದಾರೆ..

ಮಚ್ಚಿನಿಂದ ಕೊಚ್ಚಿದ್ದರಿಂದ ಆಬಿದ್‌ ಅಲ್ಲಾಭಕ್ಷ್‌ ಚೌದ್ರಿ ಸ್ಥಿತಿ ಚಿಂತಾಜನಕವಾಗಿದೆ.. ಆತನನ್ನು ಸವಣೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.. ಸವಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

 

Share Post