DistrictsPolitics

47 ಬಿಜೆಪಿ ನಾಯಕರು ನಮ್ಮ ಕಡೆ ನೋಡ್ತಿದ್ದಾರೆ; ಡಿ.ಕೆ.ಶಿವಕುಮಾರ್

ಕೋಲಾರ; ಸತ್ಯ ಸಾವಿಲ್ಲ, ಸುಳ್ಳಿಗೆ ಬದುಕಿಲ್ಲ. ಸತ್ಯ ನಾಶ ಮಾಡಲು ಹೊರಟಿರುವ ಬಿಜೆಪಿ ನಾಶ ಮಾಡಲು ಬಂದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಕೋಲಾರದಲ್ಲಿ ನಡೆಯುತ್ತಿರುವ ಜೈ ಭಾರತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿಯವರನ್ನು ಅನರ್ಹಗೊಳಿಸಿ, ಅವರ ಶಕ್ತಿ ಕುಂದಿಸೋ ಯತ್ನ ಮಾಡಲಾಗುತ್ತಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ತರುವ ಮೂಲಕ ನಾವು ಅವರಿಗೆ ಶಕ್ತಿ ಕೊಡಬೇಕಿದೆ ಎಂದು ಹೇಳಿದರು.

ಮೇ ೧೦ ರಾಜ್ಯದಲ್ಲಿ ಬದಲಾವಣೆ ಮಾಡುವ ದಿನ, ನಿಮ್ಮ ಭವಿಷ್ಯ ನೀವೇ ಬದಲಾವಣೆ ಮಾಡೋ ದಿನ, ಸ್ವಾಭಿಮಾನ, ಆತ್ಮಗೌರವಗಳಿಸಿಕೊಳ್ಳುವ ದಿನ. ಇದನ್ನು ನೀವೆಲ್ಲರೂ ಮರೆಯಬಾರದು. ನಾವು ನಾಲ್ಕು ಗ್ಯಾರೆಂಟಿಗಳನ್ನು ಕೊಟ್ಟಿದ್ದೇವೆ. ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲೇ ಈ ನಾಲ್ಕನ್ನೂ ಜಾರಿ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಆಶ್ವಾಸನೆ ನೀಡಿದರು. ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಏನಾಗಿದೆ ನೋಡಿ. ೪೭ ಜನ ಬಿಜೆಪಿ ನಾಯಕರು ಪಕ್ಷ ಬಿಟ್ಟು ನಮ್ಮ ಕಡೆ ನೋಡ್ತಾ ಇದ್ದಾರೆ. ಸಾಯಂಕಾಲ ಏನಾಗುತ್ತೆ ಎಂದು ನಾನು ಮಾತನಾಡುತ್ತೇನೆ ಎಂದು ಡಿಕೆಶಿ ಹೇಳಿದರು.

Share Post