CrimeDistricts

ಕೆರೆಗೆ ಬಿದ್ದು ಮೂವರು ಆತ್ಮಹತ್ಯೆ: ಬಾಲಕಿ ಬಚಾವ್‌

ಮಾಗಡಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿ ತಾಲೂಕಿನ ದಮ್ಮನಕಟ್ಟೆ ಗ್ರಾಮದಲ್ಲಿ ನಡೆದಿದೆ. ಪತ್ನಿ, ಅತ್ತೆ ಸಮೇತ ಅಳಿಯ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಅತ್ತೆ ಸಿದ್ದಮ್ಮ(೫೫) ಪತ್ನಿ ಸುಮಿತ್ರಾ(೩೦), ಅಳಿಯ ಹನುಮಂತರಾಯ(೩೫) ಮೃತ ದುರ್ದೈವಿಗಳಾಗಿದ್ದಾರೆ.

ಹನುಮಂತರಾಯ ಸುಮಿತ್ರಾಳನ್ನು ಮದುವೆಯಾಗಿ ಅತ್ತೆ ಊರಿನಲ್ಲೇ ಉಳಿದು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ರು. ಇವರಿಗೆ ಇಬ್ಬರು ಮುದ್ದಾದ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದ್ರೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನುಮಂತರಾಯ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ. ಅತ್ತೆ ಸಿದ್ದಮ್ಮ ಮತ್ತು ಪತ್ನಿ ಸುಮಿತ್ರಾ ಇದನ್ನು ಪ್ರಶ್ನೆ ಮಾಡಿದ್ದಾರೆ. ಆಷ್ಟಕ್ಕೇ ಮಾತಿಗೆ ಮಾತು ಬೆಳೆದು ಸಾಯುವ ಹಂತಕ್ಕೆ ತಲುಪಿದೆ.

ಎಲ್ಲರೂ ಕೆರೆ ಬಳಿ ಆತ್ಮಹತ್ಯೆ ಮಾಡಕೊಳ್ಳಲು ತೆರಳಿದ ವಿಚಾರವನ್ನು ಕಿರಿಯ ಪುತ್ರಿ ಚಂದನಾ ಗ್ರಾಮಸ್ಥರಿಗೆ ತಿಳಿಸಿದ್ದಾಳೆ. ಕೂಡಲೇ ಗ್ರಾಮಸ್ಥರು ಕೆರೆಯ ಬಳಿ ಹೋಗುವಷ್ಟರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಬಾಲಕಿ ಚಂದನಾಳನ್ನು ಮಾತ್ರ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಘಟನೆ ಬಗ್ಗೆ ಕುದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post