CrimeDistricts

ಮೂತ್ರ ವಿಸರ್ಜನೆ ಮಾಡುವಾಗ ಪ್ರವಹಿಸಿದ ವಿದ್ಯುತ್‌; ಯುವಕ ಸಾವು!

ಶಿವಮೊಗ್ಗ; ಮೂತ್ರ ವಿಸರ್ಜನೆ ಮಾಡುವಾಗ ವಿದ್ಯುತ್‌ ಪ್ರವಹಿಸಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.. ಶಿವಮೊಗ್ಗ ಜಿಲ್ಲೆ ರಿಪ್ಪನ್‌ ಪೇಟೆ ಬಳಿ ಗವಟೂರಿನ ಹಳೂರು ಗ್ರಾಮದಲ್ಲಿ ಈ ದುರಂತ ನಡೆದಿದ್ದು, 19 ವರ್ಷದ ಕಾರ್ತೀಕ್‌ ಎಂಬಾತ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ; ನೇಪಾಳದಲ್ಲಿ ಭಾರೀ ಭೂಕುಸಿತ; 63ಕ್ಕೂ ಹೆಚ್ಚು ಮಂದಿ ನಾಪತ್ತೆ!

ಕಾರ್ತೀಕ್‌ ಬೆಳಗ್ಗೆ ಎದ್ದು ಮನೆ ಮುಂದಿರುವ ಐಬೆಕ್ಸ್‌ ಬೇಲಿಯ ಬಳಿ ಮೂರ್ತಿ ವಿಸರ್ಜನೆ ಮಾಡಿದ್ದಾನೆ.. ಈ ವೇಳೆ ಕಾರ್ತೀಕ್‌ ದೇಹಕ್ಕೆ ಪ್ರವಹಿಸಿದೆ.. ಇದರಿಂದಾಗಿ ಕಾರ್ತೀಕ್‌ ಬೇಲಿಯ ಮೇಲೆ ಬಿದ್ದಿದ್ದಾನೆ..
ಇದನ್ನು ನೋಡಿದ ಮನೆಯವರು ಕೂಡಲೇ ಆತನನ್ನು ರಕ್ಷಿಸಿ, ಆಸ್ಪತ್ರೆಗೆ ಸೇರಿಸಿದರು.. ಆದ್ರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಆತ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ಬಿ,ನಾಗೇಂದ್ರ ಇಡಿ ವಶಕ್ಕೆ!

ಬೇಲಿ ಮೇಲೆ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

Share Post